ನವದೆಹಲಿ prajakiran.com : ಡಾಮಿನಿಕಾದಲ್ಲಿ ಅಕ್ರಮ ಗಡಿ ಪ್ರವೇಶ ಆರೋಪದಡಿ ಬಂಧನದಲ್ಲಿರುವ ಮೆಹುಲ್ ಚೋಕ್ಸಿಯ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ನಿರಾಕರಿಸಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ನ ತೀರ್ಪಿನ ಬಳಿಕ ಇದೀಗ ಹೈ ಕೋರ್ಟ್ ಮೊರೆ ಹೋಗುವುದಾಗಿ ಮೆಹುಲ್ ಪರ ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ.
ಬುಧವಾರ ವಿಚಾರಣೆ ಬಳಿಕ ಮೆಹುಲ್ ರನ್ನು ಗಡಿಪಾರು ಮಾಡುವುದಾಗಿ ತಿಳಿಸಿತ್ತು.
ಭಾರತೀಯ ಬ್ಯಾಂಕಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಮೆಹುಲ್ ಅವರ ಅರ್ಜಿ ಸಮರ್ಥವಾಗಿಲ್ಲ.
ಈ ಅರ್ಜಿಯನ್ನು ವಿಚಾರಣೆಗೊಳಪಡಿಸಬಾರದು ಎಂದು ಡಾಮಿನಿಕಾ ಪಬ್ಲಿಕ್ ಪ್ರಾಸಿಕ್ಯೂಷನ್ ವಾದ ಮಂಡಿಸಿದೆ.
ಭಾರತ ಮೆಹುಲ್ ರನ್ನು ಗಡಿಪಾರು ಮಾಡುವಂತೆ ಕೋರಿದ್ದು, ಖಾಸಗಿ ವಿಮಾನವನ್ನು ಕಳುಹಿಸಲಾಗಿತ್ತು.
ಆದರೆ ಗಡೀಪಾರು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಧ್ಯಮಗಳ ವರದಿ ತಿಳಿಸಿದೆ.