ಹೈದರಾಬಾದ್ prajakiran.com : ತಾಯಿ ಕೊರೋನಾ ಸೋಂಕಿನಿಂದ ಮೃತಪಟ್ಟ ಸುದ್ದಿ ಕೇಳಿ ಮಗ ಕೆರೆಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಹೈದರಾಬಾದ್ನ ಕಟೇದನ್ ಏರಿಯಾದಲ್ಲಿ ನಡೆದಿದೆ.
ಮೈಲಾರ್ದೇವ್ಪಲ್ಲಿ ವಿಭಾಗದ ಮಧುಬನ ಕಾಲೋನಿಯ ನಿವಾಸಿ ಗಿಲ್ಲ ಶ್ರೀಹರಿ (22) ಮೃತ ದುರ್ದೈವಿ. ಶ್ರೀಹರಿ ಇಂಜಿನಿಯರಿಂಗ್ ಓದುತ್ತಿದ್ದು, ಜತೆಗೆ ಸಣ್ಣ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ತಾಯಿ ರುಕ್ಮಿಣಿಗೆ ಕೊರೋನಾ ಸೋಂಕು ತಗುಲಿತ್ತು. 37 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾರೆ.
ತಾಯಿ ಸಾವಿನ ಸುದ್ದಿ ಕೇಳಿದ ಮಗ ಸಹಿಸಲಾಗದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.