ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗದಿದ್ದರೆ ಲಾಕ್ಡೌನ್ ಮಾಡಲೇ ಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಈಗಾಗಲೇ ರಾಜ್ಯದಲದಲಿ ಅತಿಯಾಗಿರುವ ಸಾವು ನೋವು ನೋಡುವುದಕ್ಕೆ ಆಗುತ್ತಿಲ್ಲ.
ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಲಾಕ್ಡೌನ್ ಬೇಕೆಂದು ಆರೋಗ್ಯ ಇಲಾಖೆ ಒತ್ತಿ ಹೇಳುತ್ತಿದೆ.
ತಜ್ಞರು ಕೂಡ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಲಾಗುವುದು ಎಂದಿದ್ದಾರೆ.