ಒಂದು ವಾರ ಕಡ್ಡಾಯ ಮುಚ್ಚಲು ಆದೇಶ*
ಧಾರವಾಡ prajakiran.com: ಕೋವಿಡ್ ಸುರಕ್ಷತಾ ಮಾರ್ಗಸೂಚಿ ಉಲ್ಲಂಘನೆ ಮಾಡಿ ಸಾಂಕ್ರಾಮಿಕ ಹರಡಲು ಪರೋಕ್ಷವಾಗಿ ಕಾರಣವಾಗಿರುವ ಹುಬ್ಬಳ್ಳಿ ಧಾರವಾಡ ಅವಳಿನಗರದ 3 ಬಾರ್ಗಳು ಹಾಗೂ ಒಂದು ಜ್ಯುವೆಲರಿ ಮಳಿಗೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಭಾಗ 22 ರನ್ವಯ ಪ್ರಕರಣ ದಾಖಲಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಗೋಕುಲ ರಸ್ತೆಯ ಶ್ರೀಕೃಷ್ಣ ಎನ್ ಖೋಡೆ ಅವರ ಸಿ.ಎಲ್ .9 ಸನ್ನದು ಹೊಂದಿರುವ ಬಾರ್, ಧಾರವಾಡ ಸಪ್ತಾಪೂರ ದುರ್ಗಾ ಪೆಗ್ ಬಾರ್, ನವನಗರದ ವಿಶ್ವನಾಥ ಆರ್ ಶೆಟ್ಟಿ ಅವರಿಗೆ ಸೇರಿದ ಬಾರ್ ಹಾಗೂ ಧಾರವಾಡ ಸೂಪರ್ ಮಾರ್ಕೆಟ್ ಗಾಂಧಿಚೌಕ ಬಳಿಯ ಗುಲಾಬಿ ಜ್ಯುವೆಲ್ಲರಿ ಮಳಿಗೆಯಲ್ಲಿ ಕೋವಿಡ್ ಶಿಷ್ಟಾಚಾರ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿರುವ ಈ ಹಿನ್ನೆಲೆಯಲ್ಲಿ ನಿನ್ನೆ ಏ.20 ರಂದು ಜಿಲ್ಲಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.ಏ.20 ರಿಂದ 26 ರವರೆಗೆ ಒಂದು ವಾರ ಕಾಲ ಈ ಮಳಿಗೆಗಳನ್ನು ಕಡ್ಡಾಯವಾಗಿ ಮುಚ್ಚಲು ಸೂಚಿಸಿದ್ದಾರೆ.