ಧಾರವಾಡ Prajakiran.com : ವಿದ್ಯುತ್ ತಂತಿಯ ಮೇಲೆ ಬೃಹತ್ ಮರದ ಟೊಂಗೆ ಬಿದ್ದ ಪರಿಣಾಮ ಸಾಲು ಸಾಲು ವಿದ್ಯುತ್ ಕಂಬಗಳು ಧರೆಗೆ ಉರುಳಿದ ಘಟನೆ ಧಾರವಾಡದ ನಾರಾಯಣಪುರ ಬಡಾವಣೆಯಲ್ಲಿ ನಡೆದಿದೆ.
ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ಧಾರವಾಡ ನಗರದ ವಿವಿಧ ಬಡಾವಣೆಯಲ್ಲಿ ಕರೆಂಟ್ ಇಲ್ಲದೇ ಕತ್ತಲೆ ಆವರಿಸಿದೆ.
ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಆಗಮಿಸಿ ವಿದ್ಯುತ್ ಕಂಬಗಳನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ.
ಹುಬ್ಬಳ್ಳಿ ಧಾರವಾಡ ವಿದ್ಯುತ್ ಸರಬರಾಜು ಇಲಾಖೆ ಸಿಬ್ಬಂದಿಗಳು ಸಹ ಸ್ಥಳಕ್ಕೆ ಬಂದು ಪೊಲೀಸರ ಜೋತೆಗೆ ಕೈಜೋಡಿಸಿದರು.
ಸರಿ ಸುಮಾರು ಹತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.
ರ್ದುಘಟನೆ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಹೆಸ್ಕಾಂ ವಿರುದ್ಧ ವಿದ್ಯಾನಗರಿ ಧಾರವಾಡದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.