ಹುಬ್ಬಳ್ಳಿ prajakiran.com : ಪಾಪದ ಪಿಂಡಗಳ ಬಗ್ಗೆ ಕಾಂಗ್ರೆಸ್ ನವರು ಮೊದಲು ಪಶ್ಚಾತ್ತಾಪ ಮಾಡಿಕೊಳ್ಳಲಿ. ಆ ಬಳಿಕ ಭಾರತ ಜೋಡೋ ಮಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.
ಅವರು ಭಾನುವಾರ ರಾಣಿ ಚೆನ್ನಮ್ಮ ಜಯಂತಿ ನಿಮಿತ್ತ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು.
ಭಾರತ ಜೋಡೋ ಕಾಂಗ್ರೆಸ್ ತೋಡೋ ಯಾತ್ರೆ ಆಗತ್ತಿದೆ. ಹಲವರು ಕಾಂಗ್ರೆಸ್ ಚೋಡೋ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮಾಡಬೇಕಿರೋದು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ಮಾಡಲಿ, ಇಲ್ಲವೇ ಚೀನಾಗೆ ಭೂಮಿ ಕೊಟ್ಟಿದ್ದರ ಜೋಡೋ ಮಾಡಲಿ ಎಂದ ಅಪಹಾಸ್ಯ ಮಾಡಿದರು.
ಮಹದಾಯಿ ಕಾರ್ಯಾಗಾರ ವಿರುದ್ಧ ಗರಂ:
ಮಹದಾಯಿ ಕಾಮಗಾರಿ ಕಾರ್ಯಾಗಾರದ ಕುರಿತು ಅವರೇನಾದರೂ ಕಾರ್ಯಗಾರ ಮಾಡಿಕೊಳ್ಳಲಿ. ಜನರಿಗೆ ನೀರು ಬೇಕೋ ಅಥವಾ ಸ್ವರೂಪ ಹೇಗೆ ಇರುತ್ತೆ ಅದು ಬೇಕೋ ಎಂದು ಕಿಡಿಕಾರಿದರು.
ಈಗಾಗಲೇ ಸಚಿವ ಗೋವಿಂದ ಕಾರಜೋಳ ಬಹಳ ಮುತುವರ್ಜಿಯಿಂದ ಒಳ್ಳೆಯ ಕೆಲಸ ಮಾಡಿದ್ದಾರೆ. ಟೆಕ್ನಾಲಜಿ ಉಪಯೋಗಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಾಡು ಹಾಳು ಕಡಿಮೆ ಮಾಡಬೇಕಿದೆ. ಟೆಕ್ನಾಲಜಿ ಬಳಸಿ ಅರಣ್ಯ ಉಳಿಸಬೇಕಿದೆ ಎಂದರು.
ಒಂದು ವರ್ಷದೊಳಗೆ ನೀರು ಬರುತ್ತೆ. ಇದು ರೈತರಿಗೆ ಅರ್ಥ ಆಗಬೇಕು. ಆದರೆ ಕೆಲವು ನಿರುದ್ಯೋಗಿಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ವಿರುದ್ಧ ಅಸಮಾಧಾನ ಹೊರಹಾಕಿದರು.