ಧಾರವಾಡ prajakiran. com : ಇಲ್ಲಿನ ಮರಾಠಾ ಕಾಲನಿ ನಿವಾಸಿ, ದಲಾಲ್ ವ್ಯಾಪಾರಸ್ಥ ಗಿರೀಶ ಶಂಕರರಾವ್ ಚಿಂಚೋರೆ (57) ದಿ.18 ರಂದು ಸೋಮವಾರ ರಾತ್ರಿ ನಿಧನ ಹೊಂದಿದರು.
ಅವರಿಗೆ ಸಂಜೆ ಹೃದಯ ನೋವು ಕಾಣಿಸಿಕೊಂಡಿತ್ತು. ತಕ್ಷಣ ಧಾರವಾಡದ ಎಸ್ ಡಿ ಎಂ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು.
ಅವರು ಪತ್ನಿ, ಪುತ್ರ ಮತ್ತು ಸಹೋದರ, ಕಾಂಗ್ರೆಸ್ ಮುಖಂಡ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ.
ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುರುಘಾಮಠದ ಬಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.