ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ
ಮಳೆಯಿಂದ ಹಾನಿಗೊಳಗಾದ ಮನೆಗಳ ಹಂಚಿಕೆಯಲ್ಲಿ ಕರ್ತವ್ಯ ಲೋಪವೆಸಗಿರುವ ನಾಲ್ವರು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಧಾರವಾಡ ಜಿಲ್ಲಾಧಿಕಾರಿ ನಿತೀಶ ಪುಟ ಆದೇಶ ಮಾಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದಲ್ಲಿ ಬಹುತೇಕ ಮನೆಗಳು ಬಿದ್ದಿದ್ದವು.
ಬಿದ್ದ ಮನೆಗಳಿಗೆ ಪರಿಹಾರ ನೀಡುವ ಬದಲು, ಬೀಳದೆ ಇರುವ ಮನೆಗಳಿಗೆ ಪರಿಹಾರ ನೀಡಿ ಈ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಅತೀವೃಷ್ಟಿ ಪರಿಹಾರ ಫಲಾನುಭವಿ ಆಯ್ಕೆಯಲ್ಲಿ ಕೂಡಾ ಈ ಅಧಿಕಾರಿಗಳು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಶಾಸಕರು ಈ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲಗೆ ಪತ್ರ ಬರೆದಿದ್ದರು.
ಅದಕ್ಕಾಗಿಯೇ
ಉಪವಿಭಾಗಾಧಿಕಾರಿಗೆ ತನಿಖೆ ಮಾಡಿ ವರದಿ ಸಲ್ಲಿಸಲು ಡಿಸಿ ಸೂಚಿಸಿದ್ದರು. ವರದಿಯಲ್ಲಿ ಈ ಅಧಿಕಾರಿಗಳು ಅವ್ಯವಹಾರ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ, ಕಂದಾಯ ನಿರೀಕ್ಷಕ ಎನ್.ಸಿ. ಪಟ್ಟೇದ, ಗ್ರಾಮ ಲೆಕ್ಕಾಧಿಕಾರಿ ರಾಕೇಶ ಪಾಟೀಲ, ಪಿಡಬ್ಯುಡಿ ಇಲಾಖೆ ಸಹಾಯಕ ಅಭಿಯಂತರ ನಿಖಿಲೇಶ ಭಾರದೇಶ ಹಾಗೂ ಯಾದವಾಡ ಪಿಡಿಓ ಪೀರಪ್ಪ ವಾಲಿಕಾರಗೆ ಅಮಾನತ್ತು ಮಾಡಿ ಆದೇಶ ನೀಡಲಾಗಿದೆ.