ಮಡಿಕೇರಿ Prajakiran.com :ಇಲ್ಲಿನ ಸಿದ್ಧಾಪುರ ಸಮೀಪದ ಮಠ ಎಂಬಲ್ಲಿ ಗಬ್ಬದ ಹಸುವನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ನಾಲ್ವರನ್ನು ಸಿದ್ದಾಪುರ ಪೊಲೀಸರು ಬಂದಿಸಿದ್ದಾರೆ.
ಮಠ ಗ್ರಾಮದ ಕ್ಷೇವಿಯರ್ ಎಂಬವರಿಗೆ ಸೇರಿದ ಎರಡು ತಿಂಗಳು ಗಬ್ಬದ ಹಸುವನ್ನು ರಂಜಾನ್ ಗೆ ಮುನ್ನ ದಿನ ಕದ್ದು ಹತ್ಯೆ ಮಾಡಿ ಮಾಡಲಾಗಿತ್ತು.
ಈ ಸಂಬಂಧ ದೊರೆತ ದೂರಿನ ಅನ್ವಯ ತನಿಖೆ ಆರಂಭಿಸಿದ ಸಿದ್ದಾಪುರ ಪೊಲೀಸರು ನಾಸಿರ್, ಶಕೀರ್, ಹಂಸ, ಆಶೀಶ್ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಹಂಸ ಮತ್ತು ಶಕೀರ್ ಅಪ್ಪ – ಮಗನಾಗಿದ್ದು, ಸೈಜು ಎಂಬಾತನ ಮಗ ಶಕೀರ್ ಕಲ್ಲಳ ಮಾಲ್ದಾರೆ ನಿವಾಸಿಯಾಗಿದ್ದಾನೆ. ಉಳಿದವರು ಬಾಡಗ ಬಾಣಂಗಾಲ ಗ್ರಾಮದವರೆನ್ನಲಾಗಿದೆ.