ಬಿಳಿಗಿರಿ ಶ್ರೀನಿವಾಸ
ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರ್ರ್ಸ್ ಕಥೆ ಏನೆಂಬುದು ಎಲ್ಲರಿಗೂ ಗೊತ್ತೆ ಇದೆ.
ಅದೇ ರೀತಿಯ ನೈಜ ಸಂಗತಿಗೆ ಚಾಮರಾಜನಗರ ಜಿಲ್ಲೆಯ ಬಂಡೀಪುರದದ ರಾಮಾಪುರ ಆನೆ ಕ್ಯಾಂಪ್ ಸಾಕ್ಷಿಯಾಗಿದೆ ತಬ್ಬಲಿಯಾಗಿದ್ದ ಆನೆ ಮರಿಯೊಂದನ್ನು ಸಾಕಿ ಸಲಹುತ್ತಿದ್ದಾರೆ ಇಲ್ಲಿನ ರಾಜು ರಮ್ಯ ಎಂಬ ಕಾವಾಡಿ ದಂಪತಿ
ಹೌದು ಬಂಡೀಪುರ ಹುಲಿಸಂರಕ್ಷಿತ ಪ್ರದೇಶ ನುಗು ಅರಣ್ಯ ವಲಯದಲ್ಲಿ ಮರಿಯಾನೆಯೊಂದು ತಾಯಿಯಿಂದ ಬೇರ್ಪಟ್ಟಿತ್ತು.
ತಾಯಿ ಆನೆ ಬಳಿ ಸೇರಿಸಲು ಅರಣ್ಯ ಸಿಬ್ಬಂದಿ ಸತತ ಪ್ರಯತ್ನ ನಡೆಸಿದರು ತಾಯಿ ಆನೆ ಸಿಗಲೇ ಇಲ್ಲ
ಹಾಗಾಗಿ ಈ ಆನೆಮರಿಯನ್ನು ರಾಮಾಪುರ ಅರಣ್ಯ ಶಿಬಿರಕ್ಕೆ ತಂದು ಅದರ ಪಾಲನೆ ಪೋಷಣೆ ಜವಾಬ್ದಾರಿಯನ್ನು ರಾಜು ರಮ್ಯ ಕಾವಾಡಿ ದಂಪತಿಗೆ ವಹಿಸಲಾಗಿದೆ
ಇವರು ಮರಿಯಾನೆಯ ಪಾಲನೆ ಪೋಷಣೆ ಮಾಡುತ್ತಿದ್ದಾರೆ
ಈ ಅನಾಥ ಮರಿಯಾನೆಗೆ ಪ್ರೀತಿಯ ಧಾರೆ ಎರೆಯುತ್ತಿದ್ದಾರೆ. ಪುಟಾಣಿ ಆನೆಗೆ ನಿತ್ಯ ಸ್ನಾನ ಹಾಲು ವಾಕಿಂಗ್, ಹುಲ್ಲು ತಿನ್ನುವ ಅಭ್ಯಾಸ ಮಾಡಿಸುತ್ತಾ ಸಾಕುತ್ತಿದ್ದಾರೆ
ಆಸ್ಕರ್ ಪ್ರಶಸ್ತಿ ಪುರಸ್ಕೃತ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರ ದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ನೈಜಪಾತ್ರದಾರಿಗಳಾಗಿದ್ದರೆ ಇಲ್ಲಿ ಈ ಪಾತ್ರಗಳನ್ನೇ ಹೋಲುತ್ತಿದ್ದಾರೆ