*ಮಮತಾ ಹೊಸಗೌಡರಿಗೆ ಸಾಕ್ಷ್ಯಿ ಹೇಳುವಂತೆ ನೋಟಿಸ್*
*ಕೋಟ್ಯಾಂತರ ರೂಪಾಯಿ ಹಣ ಅದಲುಬದಲು ಆರೋಪಿಗಳಿಗೆ ಶುರುವಾಗಿದೆ ನಡುಕ*
*ಜನಜಾಗೃತಿ ಸಂಘದ ಹೋರಾಟಕ್ಕೆ ಸಿಕ್ತು ಮತ್ತೊಂದು ಗರಿ*
*ಸಿಐಡಿ ಆಯಿತು ಈಗ ಇಡಿ ಸರದಿ*
ಧಾರವಾಡ ಪ್ರಜಾಕಿರಣ. ಕಾಮ್ : ಉತ್ತರ ಕರ್ನಾಟಕ ಭಾಗದ ಎಳು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ಧಾರವಾಡ ಕೆಐಎಡಿಬಿ ಬಹುಕೋಟಿ ಹಗರಣ ಇನ್ನೇನು ಮುಚ್ಚಿಯೇ ಹೋಯಿತು.
ನಮಗ್ಯಾರು ಕೇಳೂರು ಹೇಳೋರು ಇಲ್ಲ ಎಂದು ಪೋಸು ಕೊಟುಗೊಂಡು ಓಡಾಡುತ್ತಿದ್ದ ಮರಿಪುಡಾರಿಗಳಿಗೆ, ಸಣ್ಣಪುಟ್ಟ ಪತ್ರಿಕೆ ಹೆಸರು ಹೇಳಿಕೊಂಡು ಅಂದಾದರ್ಬಾರ ನಡೆಸುತ್ತಿದ್ದ ಕೆಲ ನಕಲಿ ಪತ್ರಕರ್ತರಿಗೆ ಹಾಗೂ ವಿಶೇಷವಾಗಿ ಅಕ್ರಮಕ್ಕೆ ಸಾಥ್ ನೀಡಿ ಇಂಗು ತಿಂದ ಮಂಗನಂತಾಗಿರುವ ಕೆಐಎಡಿಬಿ ಅಧಿಕಾರಿಗಳಿಗೆ ಹಾಗೂ ಅವರ ಹಣಕಾಸು ಅವ್ಯವಹಾರಕ್ಕೆ ಸಾಥ್ ನೀಡಿದ ಐದು ಬ್ಯಾಂಕ್ ಅಧಿಕಾರಿಗಳಿಗೆ ಇದೀಗ ಜಾರಿ ನಿರ್ದೇಶನಾಲಯ ನಿದ್ದೆಗೆಡಿಸುತ್ತಿದೆ.
ಈ ಬಹುಕೋಟಿ ಹಗರಣದ ಕುರಿತು ಸಾಕ್ಷ್ಯಿ ಹೇಳುವಂತೆ ಈಗಾಗಲೇ ಕೆಐಎಡಿಬಿ ಧಾರವಾಡ ವಲಯ ವಿಶೇಷ ಭೂಸ್ವಾಧೀನಾಧಿಕಾರಿ ಮಮತಾ ಹೊಸಗೌಡರಿಗೆ ಇಡಿ ನೋಟಿಸ್ ನೀಡಿದೆ.
ಈ ಕುರಿತು ಪ್ರಜಾಕಿರಣ.ಕಾಮ್ ಮಮತಾ ಹೊಸಗೌಡರ ಅವರನ್ನು ಸಂರ್ಪಕಿಸಿದಾಗ ನೋಡಿಸ್ ನೀಡಿರುವುದನ್ನು ಖಚಿತಪಡಿಸಿದ್ದಾರೆ.
ಅಲ್ಲದೆ, ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ದಾಖಲಿಸುವಾಗ ಸಲ್ಲಿಸಿದ ಸಮಗ್ರವಾದ ಮಾಹಿತಿಯನ್ನು ಜಾರಿನಿರ್ದೇಶನಾಲಯದ ಅಧಿಕಾರಿಗಳಿಗೂ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಹೀಗಾಗಿ ಇದೀಗ ಕೆಐಎಡಿಬಿ ಬಹುಕೋಟಿ ಹಗರಣದ ಜನ್ಮ ಜಾಲಾಡಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಇದು ಕೋಟ್ಯಾಂತರ ರೂಪಾಯಿ ಹಣ ಅದಲುಬದಲು ಆರೋಪಿಗಳಿಗೆ ನಡುಕ ಶುರುಮಾಡಿದೆ.
ಇಡಿ ತನಿಖೆ ಆರಂಭಿಸಿರುವುದು
ಜನಜಾಗೃತಿ ಸಂಘದ ಹೋರಾಟಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ಸಿಐಡಿ ತನಿಖೆ ಇನ್ನೇನು ಮುಗಿದೇ ಹೋಯಿತು. ನಮಗೆ ಯಾರೂ ಎನೂ ಮಾಡಿಯಾರು ಎಂದವರಿಗೆ ಈಗಾಗಲೇ ಗರ್ವಭಂಗ ಆಗಿದ್ದು,
ಇಡಿ ಸರದಿ ಎನ್ನೆಲ್ಲಾ ಕಂಟಕ, ಸಂಕಟ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.