ಕ್ರೀಡೆ

ಧಾರವಾಡ ಪ್ರೀಮಿಯರ್ ಲೀಗ್ ಇಂಡಿಯನ್ ಸೋಲ್ಜರ್ಸ್ ಭರ್ಜರಿ ಗೆಲುವು : ಕಮಲಾಪುರ ಕೇಸರಿ ರನ್ನರ್ ಅಪ್

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಪ್ರೀಮಿಯರ್ ಲೀಗ್ (ಡಿಪಿಎಲ್) ಪಂದ್ಯಾವಳಿಯಲ್ಲಿ ನಿತಿನ್ ಇಂಡಿ ಹಾಗೂ ರತ್ನಾಕರ ಶೆಟ್ಟಿ ಮಾಲಿಕತ್ವದ
ಇಂಡಿಯನ್ ಸೋಲ್ಜರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಇಂಡಿಯನ್ ಸೋಲ್ಜರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು 8 ಓವರ್ ನಲ್ಲಿ 84 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತು.

8 ಓವರ್ ನಲ್ಲಿ 84 ಗುರಿ ಬೆನ್ನತ್ತಿದ್ದ ಕಮಲಾಪುರ ಕೇಸರಿ 8 ಓವರ್ ನಲ್ಲಿ ಕೇವಲ 57 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಲು ವಿಫಲವಾಗಿ ರನ್ನರ್ ಅಫ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.

ಇಂಡಿಯನ್ ಸೋಲ್ಜರ್ಸ್ ಹಾಗೂ
ಕಮಲಾಪುರ ಕೇಸರಿ ತಂಡಗಳ ನಡುವೆ ನಡೆದ ಫೈನಲ್ ಪಂದ್ಯ
ತೀವ್ರ ಕುತೂಹಲ ಕೆರಳಿಸಿತ್ತು.

ಧಾರವಾಡ ಪ್ರೀಮಿಯರ್ ಲೀಗ್ ಪಂದ್ಯ ವೀಕ್ಷಿಸಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚೆನ್ನಮ್ಮ ಮೈದಾನದಲ್ಲಿ ಯುವ ಸಮೂಹ ಕಿಕ್ಕಿರಿದು ತುಂಬಿತ್ತು.

ವಿಜಯದ ಬಳಿಕ ಧಾರವಾಡ ನಗರದ ಪ್ರಮುಖ ರಸ್ತೆಗಳಲ್ಲಿ ಇಂಡಿಯನ್ ಸೋಲ್ಜರ್ಸ್ ತಂಡದ ವತಿಯಿಂದ ರೋಡ್ ಶೋ ನಡೆಸಲಾಯಿತು.

ತೆರದ ಜೀಪಿನಲ್ಲಿ ಟ್ರೋಫಿ ಹಿಡಿದು ಇಂಡಿಯನ್ ಸೋಲ್ಜರ್ಸ್ ತಂಡದ ಸದಸ್ಯರು ಧಾರವಾಡ ನಗರದಾದ್ಯಂತ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಒಟ್ಟು ಎಂಟು ತಂಡಗಳ ನಡುವೆ ನಡೆದ ಡಿಪಿಎಲ್ ರೋಚಕ ಹಣಾಹಣಿಗೆ ತೆರೆ ಕಂಡಿದ್ದು, ಈ ಕ್ರಿಕೆಟ್ ತಂಡದ ಸದಸ್ಯರಿಗೆ ಈರಣ್ಣ ಮಲ್ಲಿಗವಾಡ, ಲಖನ್, ಸಮಿ, ಇಸ್ಮಾಯಿಲ್ ತಮಟಗಾರ, ಬಸವರಾಜ ಕೊರವರ, ಮೈನು ನಧಾಪ್, ಚೇತನ ಹಿರೇಕೆರೂರ, ರಾಕೇಶ ನಾಜರೆ, ಗಿರೀಶ ಹೆಗಡೆ, ಶಂಭು ಸಾಲಿಮನಿ, ಗಿರೀಶ ಶೆಟ್ಟಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು, ಯುವ ನಾಯಕರು ಪ್ರೋತ್ಸಾಹಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *