*ನಮಗೆ ಸರಿಯಾದ ನಿರ್ಧಾರ ಕೈಗೊಳ್ಳುವ ಸರ್ಕಾರ ಬೇಕಿತ್ತು : ಡಿ. ಕೆ. ಶಿವಕುಮಾರ್*
ಬೆಂಗಳೂರು prajakiran.com : ಕೇಂದ್ರ ಸರ್ಕಾರವು ಲಸಿಕಾ ನೀತಿಗೆ ಸಂಬಂಧಿಸಿದಂತೆ ಹಲವು ಬಾರಿ ‘ಯೂ-ಟರ್ನ್’ ಹೊಡೆಯುತ್ತಿದೆ. ನಮಗೆ ಸರಿಯಾದ ನಿರ್ಧಾರ ಕೈಗೊಳ್ಳುವ ಸರ್ಕಾರ ಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮವಾದ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವು ಲಸಿಕಾ ನೀತಿಗೆ ಸಂಬಂಧಿಸಿದಂತೆ ಹಲವು ಬಾರಿ ‘ಯೂ-ಟರ್ನ್’ ಹೊಡೆಯುತ್ತಿದ್ದು, ವೃತ್ತದಲ್ಲಿ ತಿರುಗುತ್ತಿರುವಂತೆ ಅನಿಸುತ್ತಿದೆ.
ರಾಜ್ಯಗಳೋ ಅಥವಾ ಕೇಂದ್ರವೋ? ಉಚಿತವೋ ಅಥವಾ ಹಣ ನೀಡಬೇಕೋ? 45+ ಅಥವಾ ಎಲ್ಲರಿಗೂ? ನಮಗೆ ಸರಿಯಾದ ನಿರ್ಧಾರ ಕೈಗೊಳ್ಳುವ ಸರ್ಕಾರ ಬೇಕಿತ್ತು, ಆದರೆ ಇದೇಕೋ ಗೊಜಲಾಗುತ್ತಿದೆ ಎಂದು ಟ್ವಿಟ್ ಮಾಡಿದ್ದಾರೆ.