ಮಂಜುನಾಥ ಕವಳಿ
ಧಾರವಾಡ prajakiran.com : ಕರೋನಾ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದೆ.
ಅದರ ನಿವಾರಣೆಗೆ ಧಾರವಾಡದಲ್ಲಿ ವಿಶೇಷ ಹೋಮವನ್ನು ಮಾರ್ಚ್ 22 ರಿಂದ ಆಗಸ್ಟ್ 30ರವರೆಗೆ ಹಮ್ಮಿಕೊಳ್ಳಲಾಗಿತ್ತು.
ಭಾನುವಾರ ಧಾರವಾಡದ ಉಮಾಕಾಂತ ಗುರೂಜಿ ಮಹಾಮೃತ್ಯುಂಜಯ ಹವನ ಮಾಡುವ ಮೂಲಕ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಹೋಮದ ಪೂರ್ಣಾಹುತಿ ನೆರವೇರಿಸಿದರು.
ಸತತವಾಗಿ ಹೋಮದ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ಕರೋನಾದಿಂದ ಶಾಂತಿ ನೀಡುವಂತೆ ದೇವರ ಮೊರೆ ಹೋದರು.
ಈ ಹೋಮ ಕಾರ್ಯಕ್ರಮದಲ್ಲಿ ಧಾರವಾಡದ ಕಾಮನಕಟ್ಟಿಯ ಗುರು ಹಿರಿಯರು ಭಾಗವಹಿಸಿ ಧನ್ಯತಾ ಭಾವ ಮೆರೆದರು.