ರಾಜ್ಯ

ಧಾರವಾಡದ ಹಿಂದೂ ಸಂತನ ಮನೆಯಲ್ಲಿ ಮೊಹರಂ ಪಂಜಾ

ಧಾರವಾಡ prajakiran.com : ಹಿಂದೂಗಳು ಮೊಹರಂ ಹಬ್ಬದ ಸಂದರ್ಭದಲ್ಲಿ ಪಂಜಾಗಳಿಗೆ ಸಕ್ಕರೆ ನೈವೇದ್ಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಅದೇ ರೀತಿ ಹಿಂದೂಗಳ ಮನೆಯಲ್ಲೇ ಮೊಹರಂ ಪಂಜಾ ಪ್ರತಿಷ್ಟಾಪಿಸಿ ಧನ್ಯತಾ ಮೆರೆಯವುದು ಕೂಡಅಲ್ಲಲ್ಲಿ ನೋಡಿದ್ದೇವೆ.

ಧಾರವಾಡದ ಹಿಂದೂ ಕುಟುಂಬದ ಮನೆಯಲ್ಲಿ ಕೂಡ ಮೊಹರಂ ಪಂಜಾಗಳನ್ನ ಪ್ರತಿಷ್ಟಾಪಿಸಲಾಗಿದೆ. ಇಲ್ಲಿಗೆ ಮುಸ್ಲಿಂ ಸಮುದಾಯದ ಜನ ಬಂದು ಪ್ರಾರ್ಥಿಸುತ್ತಾರೆ.

ದೇವರಿಗೆ ಸಕ್ಕರೆ ನೈವೇದ್ಯ ಮಾಡ್ತಾರೆ.  ಧಾರವಾಡದ ದಾನು ನಗರದ ಲಕ್ಷ್ಮಣ ಚಲವಾದಿ ಅವರ ಮನೆಯಲ್ಲಿ ಈ ವಿಶಿಷ್ಟ ಸಂಪ್ರದಾಯ ಆಚರಣೆಯಲ್ಲಿದೆ.

ಸುಮಾರು ನಾಲ್ಕೈದು ವರ್ಷಗಳ ಹಿಂದೆ ಈ ಬಗ್ಗೆ ನಂಬಿಕೆ ಬಂದ ಹಿನ್ನಲೆಯಲ್ಲಿ ಲಕ್ಷ್ಮಣ ಚಲವಾದಿ ಅವರು ತಮ್ಮ ಮನೆಯಲ್ಲಿ ಮೊಹರಂ ಪಂಜಾ ಪ್ರತಿಷ್ಟಾಪಿಸಿದ್ದಾರೆ.

ಆ ವರ್ಷ ಅವರು ಅಂದುಕೊಂಡಿದ್ದೆಲ್ಲ ನೆರವೇರಿತ್ತಂತೆ. ಈ ಕಾರಣದಿಂದ ಅವರು ಪ್ರತಿ ವರ್ಷ ತಮ್ಮ ಮನೆಯಲ್ಲೇ ಪಂಜಾಗಳನ್ನು ಪ್ರತಿಷ್ಟಾಪಿಸುವ ಪರಿಪಾಠ ಪಾಲಿಸಿಕೊಂಡು ಬಂದಿದ್ದಾರೆ.

ಇವರ ಮನೆಗೆ ಬರುವ ಮುಸ್ಲಿಂ ಬಾಂಧವರು ತಮ್ಮ ಪ್ರಾರ್ಥನೆ‌ ಸಲ್ಲಿಸುತ್ತಾರೆ. ಲಕ್ಷ್ಮಣ ಚಲವಾದಿ ಅವರ ಈ ನಡೆ ಸುತ್ತಲೂ ಸೌಹಾರ್ದದ ಸೌಗಂಧ  ಹರಡುತ್ತಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *