ಅಂತಾರಾಷ್ಟ್ರೀಯ

ಧಾರವಾಡದ ಹಿರಿಯ ಶಿಕ್ಷಕ ಗುರುಪಾದ ಹೆಗಡಿ ಇನ್ನು ನೆನಪು ಮಾತ್ರ

ಧಾರವಾಡ prajakiran.com : ಧಾರವಾಡದ ಕೆಲಗೇರಿಯಲ್ಲಿರುವ ಜೆಎಸ್ ಎಸ್ ಪಬ್ಲಿಕ್ ಶಾಲೆಯ ಈ ಹಿಂದಿನ ಪ್ರಿನ್ಸಿಪಾಲ್ ರಾಗಿದ್ದ  ಹಿರಿಯ ಶಿಕ್ಷಕರಾದ ಗುರುಪಾದ ಹೆಗಡಿ ಅವರು ಸೋಮವಾರ ಸಂಜೆ ವಿಧಿವಶರಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಅವರನ್ನು ಈ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನುಇತ್ತೀಚೆಗಷ್ಟೇ ದೆಹಲಿಗೆ ಕರೆದುಕೊಂಡು ಹೋಗಲಾಗಿತ್ತು.

ಆದರೆ ಚಿಕಿತ್ಸೆ ಫಲಿಸದೆ ಅವರು ದೆಹಲಿಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಸರಳತೆ, ಆತ್ಮಿಯತೆಯಿಂದಲೇ ಸಾವಿರಾರು ಮಕ್ಕಳ ಮನಸೊರೆಗೊಂಡಿದ್ದ ಗುರುಪಾದ ಹೆಗಡಿ ಅವರು ಮಕ್ಕಳಿಗೆ ಬಹುದೊಡ್ಡ ಶಕ್ತಿ ಹಾಗೂ ಚೈತನ್ಯದ ಚಿಲುಮೆಯಾಗಿದ್ದರು.

ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರಾದ ಇವರು ವಿಜಯಪುರ ಸೈನಿಕ ಶಾಲೆ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು.

ನವದೆಹಲಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1996ರಿಂದ 2011ರವರೆಗೆ ಪ್ರಾಚಾರ್ಯರಾಗಿದ್ದಅವರು ಆನಂತರ ನೋಯ್ಡಾದಲ್ಲಿರುವ ಜೆಎಸ್ ಎಸ್ ಪಬ್ಲಿಕಶಾಲೆಯ ಪ್ರಿನ್ಸಿಪಾಲ್ ರಾಗಿ 2010-2013ರವರೆಗೆ ಕಾರ್ಯನಿರ್ವಹಿಸಿದ್ದರು.

2013ರಿಂದ 2019ರವರೆಗೆ ಧಾರವಾಡದ ಜೆಎಸ್ ಎಸ್ ಪಬ್ಲಿಕಶಾಲೆಯ ಪ್ರಿನ್ಸಿಪಾಲ್ ರಾಗಿದ್ದರು.ಕಳೆದ ವರ್ಷವಷ್ಟೇ ಜೆ ಎಸ್ ಎಸ್ ಶಾಲೆಯಿಂದ ಹೊರಬಂದಿದ್ದಅವರು ಧಾರವಾಡದಲ್ಲಿಯೇ ತಮ್ಮದೇ ಆದ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಅವರ ಅಗಲಿಕೆಯಿಂದಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾದಂತಾಗಿದೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *