ಬೆಂಗಳೂರು prajakiran.com : ಆತಂಕ, ಅಳಲಿನಲ್ಲಿಯೇ ನವದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ.
ಆ ಮೂಲಕ ಪಕ್ಷದಲ್ಲಿನ ಯಡಿಯೂರಪ್ಪ ವಿರೋಧಿ ಗುಂಪು, ಹಿತಶತ್ರುಗಳ ವಿರುದ್ದ ಗೆಲುವು ಸಾಧಿಸಿ ಮರಳುವಾಗ ಎದೆ ಉಬ್ಬಿಸಿ ಹೊರ ಬಂದ್ದಿದ್ದಾರೆ.
ಕೆಲವರು ಅವರ ನಾಯಕತ್ವ ವಿರೋಧ, ವಯಸ್ಸಿನ ಕಾರಣ ಮುಂದಿಟ್ಟು ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರೆಸುವುದು ಕಷ್ಟ ಸಾಧ್ಯ ಎಂದೆ ಬಿಂಬಿಸಲಾಗಿತ್ತು.
ಆದರೆ ಈ ಬಗೆ ಬಿ ಎಸ್ ವೈ ಬಿಗಿಪಟ್ಟು ಹಿಡಿದು ತಮ್ಮ ಮುಂದಿನ ಎರಡೂವರೆ ವರ್ಷ ಸಿಎಂ ಪಟ್ಟ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಹೈಕಮಾಂಡ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನವದೆಹಲಿ ಪ್ರವಾಸದ ಬಳಿಕ ಬೆಂಗಳೂರಿಗೆ ಹಿಂತಿರುಗಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರದ ಎಳು ಜನ ಸಚಿವರ ಜೊತೆಗೆ ಮಾತನಾಡಿದ್ದೇನೆ.
ಸಚಿವ ಸಂಪುಟ ವಿಸ್ತರಣೆ ಕೂಡ ಮಾತುಕತೆ ನಡೆಸಲಾಗಿದೆ. ನನ್ನ ದೆಹಲಿ ಪ್ರವಾಸ ಯಶಸ್ವಿಯಾಗಿದೆ. ಜೆ.ಪಿ. ನಡ್ಡಾ ಅವರ ಆದೇಶಕ್ಕೆ ಕಾಯುತ್ತಿದ್ದೇನೆ.
ಅವರ ಗ್ರೀನ್ ಸಿಗ್ನಲ್ ದೊರೆತ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಪಡಿಸಲಾಗುವುದು ಎಂದು ಬಿ ಎಸ್ ವೈ ಸ್ಪಷ್ಟಪಡಿಸಿದರು.