ಧಾರವಾಡ prajakiran.com : ಧಾರವಾಡ ಸಮೀಪದ ಬೆನಕಟ್ಟಿ ಗ್ರಾಮದ ಹೊರ ವಲಯದ ಇಟ್ಟಿಗೆ ಬಟ್ಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಹಸಿ ಇಟ್ಟಿಗೆ ಮೇಲೆ ಚಿರತೆ ಅಡ್ಡಾಡಿದ್ದು, ಅದರ ಹೆಗ್ಗುರುತು ಮೂಡಿದ್ದು,
ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಎರಡು ದಿನಗಳ ಹಿಂದೆ ಚಿರತೆ ಬಂದು ಹೋಗಿದ್ದು, ಅದನ್ನು ಸ್ಥಳೀಯರು ನೋಡಿ ಗಾಬರಿಯಿಂದ ಪಟಾಕಿ ಹಾರಿಸಿ ಓಡಿಸಿದ್ದಾರೆ ಎನ್ನಲಾಗಿದೆ .
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲೂ ಸೂಚನೆ ನೀಡಿದ್ದಾರೆ ಎಂದು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.