ಧಾರವಾಡ prajakiran.com :
ಕೃಷಿ ಕುರಿತ ಮೂರು ಕಾಯ್ದೆ ತಿದ್ದುಪಡಿ ವಿರುದ್ಧ ರೈತರ ಪ್ರತಿಭಟನೆ
ಕಡೆಗಣಿಸಿ ಈ ಕಾಯ್ದೆ ಜಾರಿ ಮಾಡಬೇಡಿ. ಇದರಿಂದ ಹಿಂದೆ ಸರಿಯಲು ಭಯ, ಮುಜುಗುರ ಉಂಟಾದರೆ ಜಾರಿ ಮಾಡದೇ ಕಪಾಟಿನಲ್ಲಿಡಿ ಎಂದು ಕೇಂದ್ರದ ಮಾಜಿ ಸಚಿವ ಬಾಬಾ ಗೌಡ ಪಾಟೀಲ್ ಸಲಹೆ ನೀಡಿದರು.
ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,
ಧರ್ಮ, ಜಾತಿ, ಪೂಜೆ, ಪುರಸ್ಕಾರದ ಮೂಲಕ ದೇಶದ ಪ್ರಗತಿ ಸಾಧ್ಯವೇ?ಎಂದು ಪ್ರಶ್ನಿಸಿದರು.
ರೈತರ ಮುಖ ನೋಡಲು ಪ್ರಧಾನಿ ಅವರಿಗೆ ಅಸಹ್ಯವೇ? ಸಚಿವರು ಹಾಗೂ ಅಧಿಕಾರಿಗಳ ಬದಲಿಗೆ ನೇರವಾಗಿ ಪ್ರಧಾನಿ ಅವರು ರೈತರನ್ನು ಸಭೆಗೆ ಕರೆದು
ಅವರ ಅಳಲು ಆಲಿಸಲಿ ಎಂದು ಆಗ್ರಹಿಸಿದರು.
ಲಕ್ಷಾಂತರ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಇಂತಹ ಪ್ರತಿಭಟನೆ ದೇಶ ಎಂದಿಗೂ ಕಂಡಿಲ್ಲ.
ನಕಲಿ ರೈತರು, ರೈತ ಮುಖಂಡರು ಹಾಗೂ ರೈತ ಸಂಘಟನೆಗಳನ್ನು ಹುಟ್ಟು ಹಾಕಿ ಕಾಯ್ದೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುತ್ತಿರುವ ಕುತಂತ್ರವೂ ಸಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ರೈತ ವಿರೋಧಿ ಕಾಯ್ದೆಗಳನ್ನು ದೇಶದ ರೈತರು ಒಪ್ಪಿಲ್ಲ ಎಂಬ ಸತ್ಯವನ್ನು ಅರಿಯಬೇಕು.
ರಾಜಕೀಯವಾಗಿ ಸೋಲುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ ಬಿಜೆಪಿ ನಾಯಕರು. ಆದರೆ ಈ ಹಠ, ಪ್ರತಿಷ್ಠೆದಿಂದ ರೈತರ ಬದುಕು ಹಾಳಾಗಲಿದೆ. ರೈತರ ಹಿತದೃಷ್ಟಿಯಿಂದ ಕಾಯ್ದೆ ಹಿಂಪಡೆದರೆ ರೈತ ಸಮುದಾಯ ಹಾಗೂ ಕೃಷಿ ಕ್ಷೇತ್ರಕ್ಕೆ ಒಳಿತಾಗಲಿದೆ.
ಭಯವಿದ್ದರೆ ಈ ಕಾಯ್ದೆ ಬೇಕಾದರೆ ಮುಚ್ಚಿಡಿ ಎಂದರು.
ಭಂಡರ ಜೊತೆ ಕುತಂತ್ರಿ ಭಂಡರು ಇವರು ಎಂದು ಚಾಟಿ ಬೀಸಿದ ಬಾಬಾಗೌಡ ಪಾಟೀಲ,
ಬೆಲೆ ನಿಯಂತ್ರಣಕ್ಕಾಗಿ ತಂತ್ರಗಾರಿಕೆ ಮಾಡಲಿ.
ರೈತರ ಬದುಕಿನ ಅನುಭವ ಇಲ್ಲದೇ ಮಾಡಿದ ಕಾನೂನು ಇದು ಎಂದು ಗುಡುಗಿದರು.
ರೈತರ ಪಕ್ಷಾತೀತ ವೇದಿಕೆ ಸಂಚಾಲಕ ಪಿ.ಎಚ್ ನೀರಲಕೇರಿ ಮಾತನಾಡಿ,ದೇಶದ ರೈತರು ಸೂತಕದಲ್ಲಿದ್ದಾರೆ. ಯೋಗೇಂದ್ರ ಯಾದವ ತಂದೆ ತೀರಿದ್ದಾರೆ. ಆದರೂ ಪ್ರತಿಭಟನೆ ಸಾಗಿದೆ.
ಸರಕಾರ ರೈತರ ಅಳಲು ಆಲಿಸದೆ ಅದನ್ನುತಡೆಯುವ ಕೆಲಸ ಮಾಡುತ್ತಿದೆ.
ಇದೇ ಮುಂದುವರೆದರೆ ರೈತರು ದಂಗೆ ಏಳಬಹುದು. ಆಡಳಿತ ಕುಸಿಯುವ ಸಾಧ್ಯತೆ ಇದೆ. ರೈತರನ್ನು ಅಲಕ್ಷ್ಯ ದೌರ್ಜನ್ಯ ಮಾಡಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ನಾವು ಸಂದಿಗ್ಧ ಸ್ಥಿತಿಯಲ್ಲಿವೆ ಎಂದು
ಪಿ.ಎಚ್ ನೀರಲಕೇರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ಶಿವಾನಂದ ಹೊಳೆಹಡಗಲಿ, ಸಿದ್ದಣ್ಣ ಕುಂಬಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.