ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಪೋಸ್ಟ್
ಧಾರವಾಡ prajakiran.com : ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ನಡೆಗೆ ಬಿಜೆಪಿ ಕಾರ್ಯಕರ್ತ ಚೌಕಿದಾರ ಮಂಜು ಎಂಬುವರಿಂದ ಅಸಮಾಧಾನ ವ್ಯಕ್ತವಾಗಿದೆ.
ಈ ಕುರಿತು ತಮ್ಮ ಫೇಸಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವಾಟ್ಸ್ ಅಪ್ ಗಳಲ್ಲಿ ಸಹ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಬಹುಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಅದಕ್ಕೆ 100% ಸತ್ಯವಾದ ಮಾತು,
ಮಂಜು ನಿಮಗೆ ಈಗ ಗೊತ್ತಾಯಿತಾ ಎಂದು ಸಹಮತ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ಪೋಸ್ಟ್ ನಲ್ಲಿಯ ಬರಹ ಹೀಗಿದೆ ನೋಡಿ.
ಯಾಕೋ ನಮ್ಮ ಶಾಸಕ ಅಮೃತ ದೇಸಾಯಿ ಕೆಲವೇ ಆತ್ಮೀಯರಿಗೆ ಶಾಸಕರಾಗುತ್ತಿದ್ದಾರೆ. ಶಿವಾಯಃ ನಮಃ ಎಂದು
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ ಮೀಸಲಾತಿ, ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಕ್ಷೇತ್ರದ ಮೀಸಲಾತಿಗೆ ಸಂಬಂಧಿಸಿದಂತೆ ಅನೇಕರಿಗೆ ಸ್ಥಾನ ಕೈ ತಪ್ಪಿಸಿರುವ ಶಾಸಕರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನ ಹಿಂದೆಯೇ ಈ ಆಕ್ರೋಶ ಸ್ಪೋಟಗೊಂಡಿರುವುದು ಇಲ್ಲಿ ಗಮನಿಸಬಹುದು.
ಇದು ಅವರ ಜೊತೆಯಲ್ಲಿ ಗುರುತಿಸಿಕೊಂಡಿರುವ ಅನೇಕ ಬಿಜೆಪಿ ಕಾರ್ಯಕರ್ತರಿಗೆ ಒಳ ಒಳಗೆ ಖುಷಿ ಕೊಟ್ಟಿದೆ. ಬರೆದದ್ದು ಸರಿಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.
ಜೊತೆಗೆ ಅದನ್ನು ತಮ್ಮ ಗೆಳೆಯರಿಗೆ, ಆಪ್ತರಿಗೆ ವಾಟ್ಸ್ ಅಪ್ ಗಳಿಗೆ ಕಳುಹಿಸುತ್ತಿದ್ದಾರೆ. ಈ ಹಿಂದೆ ಕೂಡ ಇಂತಹ ಹಲವು ಬರಹ ವೈರಲ್ ಆಗಿದ್ದು ಇಲ್ಲಿ ಸ್ಮರಿಸಬಹುದು.