ಬೆಂಗಳೂರು Prajakiran.com : ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂವನ್ನು ರದ್ದುಗೊಳಿಸಿ ಹಾಗೂ ಶಾಪಿಂಗ್ ಮಾಲ್ ಗಳು ಆರಂಭಿಸಲು ರಾಜ್ಯದಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ.
3ನೇ ಹಂತದ ಅನ್ಲಾಕ್ ಪ್ರಕ್ರಿಯೆ ಕುರಿತಾದ ಸಿಎಂ ನೇತೃತ್ವದ ಸಭೆ ಮುಗಿದಿದ್ದು, ಈ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ರದ್ದು ಮಾಡಲಾಗಿದ ಎಂದರು.
ಎಲ್ಲ ಶಾಪಿಂಗ್ ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು .
ಇನ್ನೂ ರಾಜ್ಯದಲ್ಲಿ ಚಿತ್ರಂಮದಿರಗಳನ್ನು ತೆರೆಯಲು ಯಾವುದೇ ಅವಕಾಶವಿಲ್ಲ.
ಮೇಟ್ರೋ ಸೇರಿದಂತೆ ಸಾರಿಗೆ ಸೇವೆಗಳಿಗೆ ಶೇ, 100ರಷ್ಟು ಅವಕಾಶ, ಮದುವೆಗೆ 100 ಜನರ ಅವಕಾಶ, ಕಚೇರಿಯಲ್ಲಿ ಶೇ, 100ರಷ್ಟು ಅವಕಾಶ, ಹಾಗೂ ಧಾರ್ಮಿಕ ಮಂದಿರಗಳನ್ನು ತೆರೆವುಗೊಳಿಸಲು ಅವಕಾಶ ನೀಡಲಾಗಿದೆ.
ಇನ್ನೂ ಶಾಲಾ ಕಾಲೇಜು ಆರಂಭಿಸಲು ಅವಕಾಶವಿಲ್ಲ. ಪಬ್ಗಳಿಗೂ ಅವಕಾಶವಿಲ್ಲ. ಬಾರ್ ತೆರೆಯಲು ಅವಕಾಶವಿದ್ದು, ರಾಜ್ಯಾದ್ಯಂತ ನೈಟ್ ಕರ್ಫ್ಯೂ ರಾತ್ರಿ 9ರಿಂದ ಬೆಳಿಗ್ಗೆ5ರ ವರೆಗೆ ಜಾರಿಯಲ್ಲಿರಲಿದೆ.