ಒಂಬತ್ತು ಹಾಲಿ ಸಂಸದರಿಗೆ ಕೋಕ್ ನೀಡಿದ ಬಿಜೆಪಿ ಹೈಕಮಾಂಡ್
*ಇಪ್ಪತ್ತು ಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿಗಳ ಘೋಷಣೆ*
“*ಎಂಟು ಕ್ಷೇತ್ರದಲ್ಲಿ ಹಂಚಿಕೆ ಬಾಕಿ*
ನವದೆಹಲಿ ಪ್ರಜಾಕಿರಣ.ಕಾಮ್ :
ಕಲಬುರಗಿ ಸಂಸದ ಉಮೇಶ್ ಜಾಧವ್ ಗೆ ಮತ್ತೆ ಟಿಕೆಟ್ ಹಂಚಿಕೆ ಆಗಿದೆ.
ಬೀದರ ಕ್ಷೇತ್ರದಲ್ಲಿ ವಿರೋಧದ ನಡುವೆ ಭಗವಂತ ಖೂಬಾ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳೀನಕುಮಾರ್ ಕಟೀಲ್ ಅವರನ್ನು ಕೈ ಬಿಟ್ಟು ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಅಭ್ಯರ್ಥಿಯಾಗಿದ್ದಾರೆ.
ಕೊಪ್ಪಳ ಹಾಲಿ ಸಂಸದ ಕರಡಿ ಸಂಗಣ್ಣ ಕೈ ಬಿಟ್ಟು ಡಾ. ಬಸವರಾಜ ಅವರನ್ನು ಕಣಕ್ಕೆ ಇಳಿಸಲಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ ಅಳಿಯ ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ತಜ್ಞರು ಆಗಿರುವ ಡಾ. ಸಿ.ಎನ್. ಮಂಜುನಾಥ ಅವರು ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿರುವುದು ವಿಶೇಷ.
ತುಮಕೂರು ಹಾಲಿ ಸಂಸದ ಜಿ.ಎಸ್ ಬಸವರಾಜು ಅವರ ಬದಲಿಗೆ ವಿ. ಸೋಮಣ್ಣ,
ಮೈಸೂರು ಹಾಲಿ ಸಂಸದ ಪ್ರತಾಪ ಸಿಂಹ ಗೆ ಕೋಕ್ ನೀಡಿ ಮೈಸೂರು ಸಂಸ್ಥಾನದ ಯದುವೀರ್ ಒಡೆಯರ ಗೆ ಮಣೆ ಹಾಕಲಾಗಿದೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ಕೈ ಬಿಟ್ಟು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ.
ಅದೇ ರೀತಿ ತೀವ್ರ ಕುತೂಹಲ ಕೆರಳಿಸಿದ್ದ ಗೋ ಬ್ಯಾಕ್ ಅಭಿಯಾನದ ಮೂಲಕ ರಾಜ್ಯದ ಗಮನ ಸೆಳೆದಿದ್ದ
ಉಡುಪಿ- ಚಿಕ್ಕಮಗಳೂರು ಸಂಸದೆಯಾಗಿ ಕೇಂದ್ರ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಕೈ ಬಿಟ್ಟು ಕೋಟಾ ಶ್ರೀನಿವಾಸ ಪೂಜಾರಿಗೆ ಅಭ್ಯರ್ಥಿಯನ್ನಾಗಿಸಲಾಗಿದೆ.
ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರದಿಂದ ಮಾಜಿ ಸಿಎಂ ಸದಾನಂದಗೌಡ ಅವರ ಬದಲಿಗೆ ಅಲ್ಲಿ ಕಣಕ್ಕೆ ಇಳಿಸಲಾಗಿದೆ.
ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ, ಬೆಂಗಳೂರು ಸೆಂಟ್ರಲ್ ಪಿ.ಸಿ. ಮೋಹನ, ಶಿವಮೊಗ್ಗ ಅಭ್ಯರ್ಥಿಯಾಗಿ ಮತ್ತೊಮ್ಮೆ ಬಿ.ವೈ. ರಾಘವೇಂದ್ರ ಆಯ್ಕೆಯಾಗಿದ್ದಾರೆ.
ದಾವಣಗೆರೆ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಗೆ ಮಣೆ ಹಾಕಲಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮತ್ತೆ ಪ್ರಹ್ಲಾದ ಜೋಶಿ ಮರುಆಯ್ಕೆಯಾಗಿದ್ದಾರೆ.
ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿಗೆ, ಅದೇ ರೀತಿ ಬಾಗಲಕೋಟೆಗೆ ಮತ್ತೆ ಪಿ.ಸಿ. ಗದ್ದಿಗೌಡರಿಗೆ, ಚಿಕ್ಕೋಡಿಗೆ ಅಣ್ಣಾ ಸಾಹೇಬ ಜೊಲ್ಲೆ, ಬಳ್ಳಾರಿಯಲ್ಲಿ ದೇವೆಂದ್ರಪ್ಪ ಅವರನ್ನು ಕೈ ಬಿಟ್ಟು ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ, ಚಾಮರಾಜನಗರ ಲೋಕಸಭಾ ಅಭ್ಯರ್ಥಿಯಾಗಿ ಎಸ್ ಬಾಲರಾಜ್, ಟಿಕೆಟ್ ನೀಡಲಾಗಿದೆ.
ಇನ್ನು ವಿಶೇಷ ಅಂದರೆ ಎಂಟು ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ಮಾಡದೆ ಹಾಗೆ ಉಳಿಸಿಕೊಂಡ ಹೈಕಮಾಂಡ್ ಇಪ್ಪತ್ತು ಕ್ಷೇತ್ರದಲ್ಲಿ ಅಳೆದುತೂಗಿ ಅಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ.