ರಾಜ್ಯ

ಧಾರವಾಡ ಪಶ್ಚಿಮ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಪರ ಧರ್ಮಪತ್ನಿ ಸ್ಮೃತಿ ಪ್ರಚಾರ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ-74ರ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಅರವಿಂದ ಬೆಲ್ಲದ ಪರವಾಗಿ ಅವರ ಧರ್ಮಪತ್ನಿ ಶ್ರೀಮತಿ ಸ್ಮೃತಿ ಅರವಿಂದ ಬೆಲ್ಲದ ಬುಧವಾರ ಬಿರುಸಿನ ಪ್ರಚಾರ ಮಾಡಿದರು.

ಧಾರವಾಡದ ವಾರ್ಡ ನಂ 20ರ ವಿವಿಧ ಬಡಾವಣೆಯ ಜನತೆ ಬಳಿ ಮತಯಾಚನೆ ಮಾಡಿದರು.

ಶಾಸಕ ಅರವಿಂದ ಬೆಲ್ಲದ ಅವರು ಧಾರವಾಡ ನಗರದ ಸಮಗ್ರ ಅಭಿವೃದ್ಧಿಗಾಗಿ ಹತ್ತು ಹಲವು ಹೊಸ ಯೋಜನೆ ಜಾರಿಗೊಳಿಸಿದ್ದು, ಇನ್ನು ಅನೇಕ ರೀತಿಯ ಯೋಜನೆ ಜಾರಿಗೊಳಿಸಲು ಕನಸು ಕಂಡಿದ್ದಾರೆ.

ಇದರಿಂದಾಗಿ ಮಹಾನಗರ ಜನತೆ ಅವರ ಅಭಿವೃದ್ಧಿ ಯೋಜನೆ ಸಾಕಾರಗೊಳಿಸಲು ಮತ ನೀಡಿ ಆರ್ಶೀವಾದ ಮಾಡಿ ಎಂದರು

ಈ ಸಂದರ್ಭದಲ್ಲಿ ವಾರ್ಡ ಪ್ರಮುಖರಾದ ಶ್ರೀಮತಿ ಗೀತಾ ಪಾಟೀಲ, ಶ್ರೀಮತಿ ಅಶ್ವಿನಿ ವೀರಾಪೂರ, ಶ್ರೀಮತಿ ಪೂರ್ಣ ಪಾಟೀಲ ಹಾಗೂ ಇತರರು ಭಾಗವಹಿಸಿದ್ದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *