ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ-74ರ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಅರವಿಂದ ಬೆಲ್ಲದ ಪರವಾಗಿ ಅವರ ಧರ್ಮಪತ್ನಿ ಶ್ರೀಮತಿ ಸ್ಮೃತಿ ಅರವಿಂದ ಬೆಲ್ಲದ ಬುಧವಾರ ಬಿರುಸಿನ ಪ್ರಚಾರ ಮಾಡಿದರು.
ಧಾರವಾಡದ ವಾರ್ಡ ನಂ 20ರ ವಿವಿಧ ಬಡಾವಣೆಯ ಜನತೆ ಬಳಿ ಮತಯಾಚನೆ ಮಾಡಿದರು.
ಶಾಸಕ ಅರವಿಂದ ಬೆಲ್ಲದ ಅವರು ಧಾರವಾಡ ನಗರದ ಸಮಗ್ರ ಅಭಿವೃದ್ಧಿಗಾಗಿ ಹತ್ತು ಹಲವು ಹೊಸ ಯೋಜನೆ ಜಾರಿಗೊಳಿಸಿದ್ದು, ಇನ್ನು ಅನೇಕ ರೀತಿಯ ಯೋಜನೆ ಜಾರಿಗೊಳಿಸಲು ಕನಸು ಕಂಡಿದ್ದಾರೆ.
ಇದರಿಂದಾಗಿ ಮಹಾನಗರ ಜನತೆ ಅವರ ಅಭಿವೃದ್ಧಿ ಯೋಜನೆ ಸಾಕಾರಗೊಳಿಸಲು ಮತ ನೀಡಿ ಆರ್ಶೀವಾದ ಮಾಡಿ ಎಂದರು
ಈ ಸಂದರ್ಭದಲ್ಲಿ ವಾರ್ಡ ಪ್ರಮುಖರಾದ ಶ್ರೀಮತಿ ಗೀತಾ ಪಾಟೀಲ, ಶ್ರೀಮತಿ ಅಶ್ವಿನಿ ವೀರಾಪೂರ, ಶ್ರೀಮತಿ ಪೂರ್ಣ ಪಾಟೀಲ ಹಾಗೂ ಇತರರು ಭಾಗವಹಿಸಿದ್ದರು