ಧಾರವಾಡ prajakiran.com : ಕೋವಿಡ್ -19 ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆಟೋ ರಿಕ್ಷಾ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿತ್ತು.
ಆದರೆ ಪರಿಹಾರಧನ ಎಲ್ಲರಿಗೂ ಈವರೆಗೆ ತಲುಪಿಲ್ಲಾ ಎಂದು ಆರೋಪಿಸಿ ಧಾರವಾಡ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸರ್ಕಾರವು ಆಟೋ ರಿಕ್ಷಾ ಚಾಲಕರಿಗೆ ಪರಿಹಾರ ಧನ ನೀಡಲು ಘೋಷಣೆ ಮಾಡಿತ್ತು.
ಆದ್ರೆ ರಾಜ್ಯದಲ್ಲಿ ಒಟ್ಟು ಆಟೋ ಚಾಲಕರು 7 ಲಕ್ಷ 75 ಸಾವಿರ ಇದ್ದು ಈ ಪರಿಹಾರ ಧನಕ್ಕಾಗಿ ಅರ್ಜಿಯನ್ನು ಸಲ್ಲಿಸಿದವರು, 2ಲಕ್ಷ 25 ಸಾವಿರ.
ಇದರಲ್ಲಿ ಕೇವಲ 25 ಸಾವಿರ ಜನರಿಗೆ ಮಾತ್ರ ಪರಿಹಾರ ದೊರಕಿದ್ದು, ಉಳಿದವರಿಗೆ ಕೇವಲ ಸೇವಾ ಸಿಂಧುವಿನ ಮೂಲಕ ಮೆಸೇಜ್ ಮಾತ್ರ ಬಂದಿದೆ.
ಇನ್ನೂ ಖಾಸಗಿ ಬ್ಯಾಂಕ್, ಫೈನಾನ್ಸ್, ಮೈಕ್ರೋ ಫೈನಾನ್ಸ್ ಕಂಪನಿಗಳು ಇಂತಹ ಬಿಕ್ಕಟ್ಟಿನ ಸಂಧರ್ಭದಲ್ಲಿ ಹಣ ತುಂಬುವಂತೆ ಆಟೋ ರಿಕ್ಷಾ ಚಾಲಕರನ್ನು ಪೀಡಿಸುತ್ತಿವೆ ಎಂದು ಆರೋಪಿಸಿದರು.
ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾನಿರತ ಆಟೋ ಚಾಲಕರು ಎಚ್ಚರಿಸಿದರು.