ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಬಂಧನ
35 ಗ್ರಾಂ ಚಿನ್ನಾಭರಣ ಜಪ್ತಿ
ಧಾರವಾಡ ಪ್ರಜಾಕಿರಣ.ಕಾಮ್ ಡಿ 19 :ಮೂರ್ಚೆ ಬರುವ ಚಾಕೋಲೇಟನ್ನು ತಿನಿಸಿ, ಮೈ ಮೇಲೆ ಇದ್ದ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧಿಸುವಲ್ಲಿ ಧಾರವಾಡ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆ ಮೂಲಕ ಅಂದಾಜು 75,000/- ರೂ ಕಿಮ್ಮತ್ತಿನ 15 ಗ್ರಾಂ ಬಂಗಾರದ ಚೈನ್ ಮತ್ತು ಪಿಕ್ ಪಾಕೇಟ್ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಅರೈಕೆ ಮಾಡಿದ್ದಾರೆ.
ಅಂದಾಜು 1,92,500/- ರೂ ಕಿಮ್ಮತ್ತಿನ 35 ಗ್ರಾಂ ಬಂಗಾರದ ಗುಂಡಿನ ಸರ ಜಪ್ತ ಮಾಡಿದ್ದಾರೆ.
ಆರೋಪಿ ಬಿಹಾರ ಮೂಲದ ಮಹಮ್ಮದ ಷಮಶೇರ ಶಹಾ, ತಂದೆ ಶಂಶುದ್ದೀನ್ ಶಹಾ ಫಕ್ಕೀರ, ವಯಾ: 48 ಸಾಟೋಲಾ ಗಲ್ಲಿ, ಅಲಾ ಗ್ರಾಮ, ತಾ|| ಮಹಿಷಿ, ಜಿಲ್ಲೆ ಸಹರ್ಸ, ರಾಜ್ಯ ಬಿಹಾರ ಹಾಗೂ ಕಾನೂನು ಸಂಪರ್ಷಕ್ಕೆ ಒಳಗಾದ ಬಾಲಕನಿಗೆ ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಿದ್ದಾರೆ.
ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಧಾರವಾಡ ಶಹರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ, ಎನ್.ಸಿ.ಕಾಡದೇವರ ಪಿ.ಎಸ್.ಐ ಚಂದ್ರಶೇಖರ ಮದರಖಂಡಿ, ಸಿಬ್ಬಂದಿಗಳಾದ , ಡಿ.ವಿ.ಪಾಳರಡ್ಡಿ, ಎಮ್.ಟಿ.ಗದ್ದಿಕೇರಿ, ಎನ್.ಹೆಚ್.ಗುಡಿಮನಿ , ಐ ಪಿ ಬುರ್ಜಿ, ಪಿ.ಎಸ್.ತಿರ್ಲಾಪೂರ, ಜಿ.ಜಿ.ಚಿಕ್ಕಮಠ, ಮತ್ತು ತಾಂತ್ರಿಕ ವಿಭಾಗ ಎಮ್.ಎಸ್.ಅಕ್ಕಮಠ ಆರ್.ಎಸ್.ಗೋಮಪ್ಪನವರ ಶ್ರೀದರ.ಐ.ವಡ್ಡರ , ಎಮ್.ಆರ್.ಜ್ಯಾಲಿ, ಆರ್.ಕೆ.ಭಡಂಕರ ಹಾಗೂ ಆರ್ ಎಸ್ ಗೋಮಪ್ಪನವರ. ಇವರುಗಳಿಗೆ ಪೊಲೀಸ ಆಯುಕ್ತರು ಹುಬ್ಬಳ್ಳಿ-ಧಾರವಾಡ
ಶ್ರೀಮತಿ ರೇಣುಕಾ ಕೆ ಸುಕುಮಾರ ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.