ಬೆಂಗಳೂರು prajakiran.com : ಕೆಎಸ್ಆರ್ಟಿಸಿ ಚಿನ್ನ್ಹೆ ಹಾಗೂ ಹೆಸರು ಬದಲಾವಣೆ ಕುರಿತು ಪರಿಶೀಲಿಸಿ ಸೂಕ್ತ ನಿರ್ಧಾರಕ್ಕೆ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಕೇರಳ ಹಾಗೂ ಕರ್ನಾಟಕ ಎರಡೂ ‘ಕ’ ಅಕ್ಷರದಿಂದಲೇ ಆರಂಭವಾಗುತ್ತದೆ. ಹೀಗಾಗಿ ಕೇರಳದವರು ವ್ಯಾಜ್ಯ ಹೂಡಿದ್ದರು.
ಒಂದು ಹೆಸರಿನ ಸಂಸ್ಥೆ ಎರಡು ಇರಬಾರದು. ವ್ಯಾವಹಾರಿಕವಾಗಿ ಹಾಗೂ ಔದ್ಯೋಗಿಕವಾಗಿ ಇರುವ ಸಂಸ್ಥೆಗಳು ಒಂದೇ ಹೆಸರಿನಲ್ಲಿ ಇದ್ದರೆ ಸಮಸ್ಯೆಯಾಗಲಿದೆ.
ಎರಡೂ ಸಾರ್ವಜನಿಕರಿಗೆ ಸೇವೆ ಕೊಡುವ ಸಂಸ್ಥೆಗಳು. ಇಲ್ಲಿ ಒಬ್ಬರ ಹೆಸರಿನ ಮೇಲೆ ಇನ್ನೊಬ್ಬರು ಲಾಭ ಪಡೆಯಲಾಗುವುದಿಲ್ಲ. ಇದು ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸ ಆಗಿದೆ.
ಅಧಿಕಾರಿಗಳಿಗೆ ಸೂಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.