ಧಾರವಾಡ prajakiran.com : ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯ ಪೆಂಡಾರಗಲ್ಲಿ ಗರಡಿ ಮನೆ ಹತ್ತಿರ, ಸಾರ್ವಜನಿಕ ಜಾಗೆಯಲ್ಲಿ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹು-ಧಾ ನಗರ ಡಿಸಿಪಿಗಳಾದ ಕೆ ರಾಮರಾಜನ್, ಆರ್.ಬಿ. ಬಸರಗಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ ಧಾರವಾಡ ಉಪನಗರ ಠಾಣೆ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿ ಕಾಲಕ್ಕೆ ಅರೋಪಿತರಾದ ಮಹಮ್ಮದಶಪಿ ಶಹಬುದ್ದಿನ ಮಾಣಿಕ, ರೋಷನಜಮೀರ ಖುತುಬುದ್ದಿನ ಬಸನಕೊಪ್ಪ, ಮೀರಖಾನ ಹುಸೇನಖಾನ ಪಠಾಣ ಇವರನ್ನು ದಸ್ತಗೀರ ಮಾಡಿ, ಇವರ ತಾಬಾದಿಂದ ರೂ. ೧೪೭೦/- ಗಳನ್ನು ಜಪ್ತ ಮಾಡಲಾಗಿದೆ.
ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
ಇದೇ ವೇಳೆ ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯ ಮುರುಘಾಮಠದ ಹತ್ತಿರ, ಸಾರ್ವಜನಿಕ ಜಾಗೆಯಲ್ಲಿ ಮಟಕಾ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಧಾರವಾಡ ಉಪನಗರ ಠಾಣೆ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿ ಕಾಲಕ್ಕೆ ಅರೋಪಿತನಾದ ಬರ್ಕತಅಲಿ ಇಬ್ರಾಹಿಮಸಾಬ ಶಿರಕೋಳ ಈತನ ಮೇಲೆ ದಾಳಿ ಮಾಡಿ ರೂ ೫೪೦/- ಗಳನ್ನು ಮತ್ತು ಓಸಿ ಚೀಟಿಗಳನ್ನು ಜಪ್ತ ಮಾಡಲಾಗಿದೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.
ಈ ಪ್ರಕರಣಗಳನ್ನು ಭೇದಿಸಿದ ಧಾರವಾಡ ಉಪನಗರ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರು ಉತ್ತಮ ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.