ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ ಹೊಸದಾಗಿ 204 ಜನರಿಗೆ ಸೋಂಕು ಹರಡಿದೆ.
ಇದರಿಂದಾಗಿ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. 204 ಸೋಂಕಿತರಲ್ಲಿ, 157 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ.
ಇಂದು ರಾಜ್ಯದಲ್ಲಿ 114 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 2976 ಜನ ಗುಣಮುಖರಾಗಿದ್ದು, 3195 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಜನ ಐಸಿಯುನಲ್ಲಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿಗುರುವಾರವೂ ಮೂವರು ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 72ಕ್ಕೆ ಬಂದು ನಿಂತಿದೆ.
ಗುರುವಾರ ಪತ್ತೆಯಾದ 204 ಪ್ರಕರಣಗಳಲ್ಲಿ ಯಾದಗಿರಿಯಲ್ಲಿ 66 ಪ್ರಕರಣಗಳು ಕಂಡು ಬಂದಿದ್ದು, ಕೃಷ್ಣನ ನಾಡು ಉಡುಪಿಯಲ್ಲಿ 22 ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ 17 ಹಾಗೂ ಕಲಬುರಗಿ 16, ರಾಯಚೂರು ಜಿಲ್ಲೆಯಲ್ಲಿ 15, ಬೀದರ 14, ಶಿವಮೊಗ್ಗದಲ್ಲಿ 10 ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಇನ್ನೂಳಿದಂತೆ ದಾವಣಗೆರೆಯಲ್ಲಿ 9, ಕೋಲಾರ 6, ಮೈಸೂರ 5, ರಾಮನಗರ 5, ವಿಜಯಪುರ 4, ಬಾಗಲಕೋಟೆ 3, ಉತ್ತರ ಕನ್ನಡ 3, ದಕ್ಷಿಣ ಕನ್ನಡ 2, ಹಾಸನ 2, ಧಾರವಾಡ 2, ಬೆಂಗಳುರು ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಮತ್ತಿಬ್ಬರು ಸಾವನ್ನಪ್ಪಿದ್ದಾರೆ.
ಪಿ-6020 ನೇ ಸೋಂಕಿತ 35 ವರ್ಷದ ಪುರುಷ ಕರಳು ಸಮಸ್ಯೆ, ಉಸಿರಾಟ ತೊಂದರೆಯಿಂದ ಬೆಂಗಳೂರು ನಗರದ ನಿಗದಿತ ಆಸ್ಪತ್ರೆಗೆ ಜೂನ್ 7ರಂದು ದಾಖಲಾಗಿದ್ದರು.
ಅದೇ ರೀತಿ ಪಿ 6029ನೇ ಸೋಂಕಿತ 60 ವರ್ಷದ ವ್ಯಕ್ತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರು ಜೂನ್ 9ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜೂನ್ 11ರಂದು ಸಾವನ್ನಪ್ಪಿದ್ದಾರೆ.
ಇನ್ನೂ ರಾಯಚೂರು ಜಿಲ್ಲೆಯಲ್ಲಿ ಕರೋನಾಗೆ ಎರಡನೇ ಬಲಿಯಾಗಿದ್ದು, ಪಿ-6207 ನೇ ಸೋಂಕಿತ 28 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಅವರುಬೀದರ ಜಿಲ್ಲೆಯಿಂದ ಮೇ 30ರಂದು ರಾಯಚೂರು ಜಿಲ್ಲೆಗೆ ಆಗಮಿಸಿದ್ದರು, ಜೂನ 8ರಂದು ಮರಣ ಹೊಂದಿದ್ದಾರೆಎಂದು ಆರೋಗ್ಯ ಇಲಾಖೆ ತಿಳಿಸಿದೆ.