ಹುಬ್ಬಳ್ಳಿ prajakiran.com : ಯೋಗೇಶ್ ಗೌಡ ಕೊಲೆ ಪ್ರಕರಣದಡಿ ಸಿಬಿಐ ಕಸ್ಟಡಿಯಲ್ಲಿ ವಿಚಾರಣೆಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಕುಟುಂಬಸ್ಥರು ಶನಿವಾರ ಹುಬ್ಬಳ್ಳಿಯ ಸಿ ಎ ಆರ್ ಮೈದಾನಕ್ಕೆ ಆಗಮಿಸಿದ್ದರು.
ಧಾರವಾಡದ ಬಾರಾಕೋಟ್ರಿಯಲ್ಲಿರುವ ನಿವಾಸದಿಂದ ಹುಬ್ಬಳ್ಳಿಯ ಸಿ ಎ ಆರ್ ಮೈದಾನಕ್ಕೆ ಮೂರು ಕಾರುಗಳಲ್ಲಿ ಅವರ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಮಗ ಮತ್ತು ಇತರರು ಕೇಕ್ ಕಟ್ ಮಾಡಿ ಜನ್ಮದಿನದ ಶುಭಾಶಯ ಕೋರಲು ಮುಂದಾದರು.
ಆಗ ಇದನ್ನು ನಯವಾಗಿಯೇ ನಿರಾಕರಿಸಿದ್ದರಿಂದ ಕೇಕ್ ಅನ್ನು ಮರಳಿ ವಾಹನದಲ್ಲಿ ತಂದಿಡಲಾಯಿತು ಎಂದು ತಿಳಿದುಬಂದಿದೆ.
ಇದು ಅವರ ಕುಟುಂಬ ಸದಸ್ಯರಿಗೆ ಬಹಳಷ್ಟು ಬೇಸರ ಮೂಡಿಸಿದೆ. ಆದರೆ ಈ ಬಗ್ಗೆ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.
ಮೊದಲ ಬಾರಿ ಜನುಮ ದಿನದ ಸಂಭ್ರಮಕ್ಕೆ ಕರಿಛಾಯೆ ಕವಿದಿದೆ.
ಕುಟುಂಬ ಸದಸ್ಯರಿಗೆ ನ್ಯಾಯಾಲಯವು ಪ್ರತಿ ದಿನ ಹತ್ತರಿಂದ ಹದಿನೈದು ನಿಮಿಷ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಿತ್ತು.