ರಾಜ್ಯ

ನಾನು ಬಿಜೆಪಿ ಸೇರುವ ಪ್ರಶ್ನೇಯೇ ಇಲ್ಲ ಎಂದ ವಿನಯ ಕುಲಕರ್ಣಿ

ರಾಜಸ್ತಾನ : ನಾನು ಬಿಜೆಪಿ ಸೇರುವ ಪ್ರಶ್ನೇಯೇ ಇಲ್ಲ. ದೆಹಲಿಗೆ ಹೋಗಿಲ್ಲ. ಬಿಜೆಪಿಯ  ಯಾರನ್ನು ಭೇಟಿ ಯಾಗಿಲ್ಲ. ಅಂತಹ ಬೆಳವಣಿಗೆಗಳು ಕೂಡ ನಡೆದಿಲ್ಲ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ. ಅವರು ಮಂಗಳವಾರ ಮೊಬೈಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,  ನಾನು ರಾಜಸ್ತಾನದಲ್ಲಿದ್ದೇನೆ. ನಾಲ್ಕೈದು ಕುದುರೆ ಬೇಕಾಗಿವೆ. ಅದರ ಖರೀದಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.  ನಾಳೆ ಧಾರವಾಡಕ್ಕೆ ಆಗಮಿಸಲಿದ್ದು, ಈ ಕುರಿತು ವಿವರವಾಗಿ ಪ್ರತಿಕ್ರಿಯೆ ನೀಡುವುದಾಗಿ ಬಿಜೆಪಿ ಸೇರುವ ಕುರಿತು ಎದ್ದಿರುವ ಊಹಾಪೋಹಗಳಿಗೆ ವಿನಯ ಕುಲಕರ್ಣಿತೆರೆ […]