ರಾಜ್ಯ

ಧಾರವಾಡದ ಶಿವನ ದೇವಾಲಯ ಧ್ವಂಸ :ಅಧಿಕಾರಿಗಳ ವಿರುದ್ದ ಮುತಾಲಿಕ ಸಿಡಿಮಿಡಿ

ಧಾರವಾಡ prajakiran.com : ಧಾರವಾಡ ಕ್ಯಾರಕೊಪ್ಪ ರಸ್ತೆಯಲ್ಲಿ ಶಿವನ ದೇವಾಲಯವನ್ನು ಧ್ವಂಸ ಮಾಡಿದ ಅಧಿಕಾರಿಗಳ ವಿರುದ್ಧ ಶ್ರೀರಾಮಸೇನಾ ರಾಷ್ಟ್ರೀಯಅಧ್ಯಕ್ಷ ಪ್ರಮೋದ‌ ಮುತಾಲಿಕ ಸಿಡಿಮಿಡಿಗೊಂಡಿದ್ದಾರೆ. ಅವರು ಗುರುವಾರ ಧಾರವಾಡ ತಾಲೂಕಿನ ಕ್ಯಾರಕೋಪ್ಪ ಗ್ರಾಮದ ರಸ್ತೆಯಲ್ಲಿರುವ ಅಘೋರಿ ಮಠ ತೆರವುಗೊಳಿಸಿದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಧಾರವಾಡ ತಾಲೂಕು ಆಡಳಿತದ ವಿರುದ್ದ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು. ಅಘೋರಿ ಮಠವನ್ನು ತೆರವು ಗೊಳಿಸಿದ್ದಕ್ಕೆ ಶ್ರೀರಾಮಸೇನಾ ಸಂಘಟನೆ ಕಾರ್ಯಕರ್ತರು ಸರ್ಕಾರ ಹಾಗೂ ಅಧಿಕಾರಿಗಳ ಕ್ರಮಕ್ಕೆ ತೀವ್ರ […]