ಜಿಲ್ಲೆ

ಧಾರವಾಡದಲ್ಲಿ ನಿರಂತರ ಮಳೆಗೆ ಅನ್ನದಾತನ ಮನೆ ಕುಸಿದು ಎತ್ತು ಸಾವು…!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆಯಿಂದ ಹಲವಡೆ ಬೆಳೆ ಹಾನಿ, ಮನೆ ಕುಸಿತ ಮುಂದುವರೆದಿವೆ. ಮನೆ ಕುಸಿದ ಪರಿಣಾಮ ರೈತನೋರ್ವನ ಎತ್ತು ಬಲಿಯಾದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಸೂರಶೆಟ್ಟಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.  ಗ್ರಾಮದ ಭರಮಗೌಡ ರುದ್ರಗೌಡ ಪಾಟೀಲ ಎಂಬುವರ ಮನೆಯೇ ಕುಸಿದಿದ್ದು, ಮನೆಯ ಅವಶೇಷಗಳ ಅಡಿಗೆ ಸಿಲುಕಿದ 5.5 ವರ್ಷದ  ಬಸವಣ್ಣ ಸಾವನ್ನಪ್ಪಿದ್ದಾನೆ.  ಇದರಿಂದಾಗಿ ಪಾಟೀಲರ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.  ಘಟನಾ ಸ್ಥಳಕ್ಕೆ ಕಲಘಟಗಿ ತಹಸೀಲ್ದಾರ್, ಪೊಲೀಸ್ […]