ಧಾರವಾಡ prajakiran.com : ಸರ್ಕಾರದಿಂದ ಜಿಲ್ಲೆಗೆ ೩,೩೦೦ ಆ್ಯಂಟಿಜನ್ ಪರೀಕ್ಷಾ ಕಿಟ್ಗಳು ಬರುತ್ತಿವೆ. ಕಿಮ್ಸ್, ಎಸ್ಡಿಎಂ, ಜಿಲ್ಲಾಸ್ಪತ್ರೆ ಸೇರಿದಂತೆ ಅಗತ್ಯವಿರುವ ಇತರೆ ಆಸ್ಪತ್ರೆಗಳಲ್ಲಿ ದಾಖಲಾಗುವ ಇತರೆ ಸಾಮಾನ್ಯ ಒಳ ರೋಗಿಗಳನ್ನು ಆ್ಯಂಟಿಜನ್ ಪರೀಕ್ಷೆಗೆ ಒಳಪಡಿಸಲು ಅನುಕೂಲವಾಗಲಿದೆ. ಈ ಪರೀಕ್ಷೆಯಿಂದ ಕೋವಿಡ್ನ ತಪಾಸಣಾ ವರದಿ ತ್ವರಿತವಾಗಿ ಕೆಲವೇ ಗಂಟೆಗಳಲ್ಲಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೀವ್ರ ನೆಗಡಿ, […]