*ಕೆಐಎಡಿಬಿ ಕಿಂಗಪಿನ್ ಅಶ್ಪಕ್ ದುಂಡಸಿಗೆ
ಜಾಮೀನು ಅರ್ಜಿ ವಜಾ*
*ಜಾಮೀನು ನಿರಾಕರಿಸಿದ ನ್ಯಾಯಾಲಯ*
*ಮೂರನೇ ಹೆಚ್ಚುವರಿ ಸಿನಿಯರ್ ಸಿವಿಲ್
ಜಡ್ಜ್ ಕೋರ್ಟ್ ನಿಂದ ಮಹತ್ವದ ಆದೇಶ*
*ಸಿಐಡಿ ತಕರಾರು ಅರ್ಜಿಗೆ ಮಾನ್ಯ ಮಾಡಿದ ಕೋರ್ಟ್*
ಧಾರವಾಡ ಪ್ರಜಾಕಿರಣ.ಕಾಮ್ : ಕೆ ಐ ಎ ಡಿ ಬಿ ಬಹುಕೋಟಿ ಹಗರಣದ ಕಿಂಗ್ ಪಿನ್ ಮೆಹಬೂಬ್ ಅಲಿಯಾಸ್
ಅಶ್ಫಕ್ ಅಲ್ಲಾಭಕ್ಷ ದುಂಡಸಿಯ ಬಂಧನದ ಬೆನ್ನಲ್ಲೇ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ.
ಇದಕ್ಕೆ ತಕರಾರು ಸಲ್ಲಿಸಿದ್ದ ಸಿಐಡಿ
ಕೆಐಎಡಿಬಿ ಕಿಂಗಪಿನ್ ಅಶ್ಪಕ್ ದುಂಡಸಿಗೆ ಯಾವುದೇ ಕಾರಣಕ್ಕೂ
ಜಾಮೀನು ನೀಡಬಾರದು.
ಪ್ರಕರಣದ ತನಿಖೆ ಮುಂದುವರೆದಿದೆ ಎಂದು ನ್ಯಾಯಾಲಯದ ಮುಂದೆ ಮನವರಿಕೆ ಮಾಡಲಾಯಿತು.
ಇದರಿಂದ ಜಾಮೀನು ನಿರಾಕರಿಸಿದ ಧಾರವಾಡದ ಮೂರನೇ ಹೆಚ್ಚುವರಿ ಸಿನಿಯರ್ ಸಿವಿಲ್
ಜಡ್ಜ್ ಹಾಗೂ ಸಿಜೆಎಂ
ಕೋರ್ಟ್ ಅರ್ಜಿ ವಜಾಗೊಳಿಸಿ
ನಿಂದ ಮಹತ್ವದ ಆದೇಶ ಹೊರಡಿಸಿತು.
ಸಿಐಡಿ ಅಧಿಕಾರಿಗಳ ತಂಡ ಕೋಟಿ ಕೋಟಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದ ಕೆ ಐ ಎ ಡಿ ಬಿಯ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುವ ಕಾರ್ಯ ಮುಂದುವರೆಸಿದ್ದಾರೆ.
ಮೆಹಬೂಬ್ ಅಲಿಯಾಸ್ ಅಶ್ಪಕ್ ದುಂಡಸಿಯ ಬಣ್ಣದ ಮಾತಿಗೆ ಮರಳಾಗಿ ಕೆ ಐ ಎ ಡಿ ಬಿ ಅಧಿಕಾರಿಗಳಾದ ವಿ.ಡಿ. ಸಜ್ಜನ, ಶಂಕರ ತಳವಾರ ಹಾಗೂ ಇತರ ಹದಿಮೂರು ಜನ ಆರೋಪಿಗಳು ಎರಡನೇ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಖಜಾನೆಗೆ ಕೋಟಿ ಕೋಟಿ ಕನ್ನ ಹಾಕಿದ್ದರು.
ಈ ಬಗ್ಗೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹೋರಾಟ ನಡೆಸಿ ಅಂದಿನ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು.
ಆನಂತರ ಎಚ್ಚೆತ್ತ ಸರಕಾರ ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಲು ಸೂಚಿಸಿದ್ದರ ಪರಿಣಾಮ ಇಂದು ಸಾಲು ಸಾಲು ಆರೋಪಿಗಳು ಜೈಲು ಪಾಲಾಗಿದ್ದಾರೆ.
ಸರ್ಕಾರದ ಹಣ ಹೊಡೆಯಲು ಸಹಕಾರ ನೀಡಿದ್ದ ಆರೋಪದ ಮೇಲೆ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.
ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ ಹತ್ತು ಜನರನ್ನು ಬಂಧಿಸಿ ಜೈಲಿಗೆ ಅಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.