ಧಾರವಾಡ prajakiran.com : ತಾಲೂಕಿನ ತಲವಾಯಿ ಗ್ರಾಮದಲ್ಲಿ ಸೈನಿಕರಿಗೊಂದು ಸಲಾಮ್ ಶೀರ್ಷಿಕೆಯಡಿಯಲ್ಲಿ ವೀರಯೋಧರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಜ. 26ರಂದು ಸಂಜೆ 5ಕ್ಕೆ ಏರ್ಪಡಿಸಲಾಗಿದೆ.
ಈ ಸಮಾರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಿವೃತ್ತ ಭೂಸೇನಾ ಹವಾಲ್ದಾರ ಬಸಪ್ಪ ಕಮ್ಮಾರ, ನಿವೃತ್ತ ನಾಯಕ ಮಹೇಶ ತಿರ್ಲಾಪುರ, ನಿವೃತ್ತ ಬಿಎಸ್ಎಫ್ ಹವಾಲ್ದಾರರಾದ ನಾಗಪ್ಪ ಹೊಸಮನಿ, ಪ್ರಕಾಶ ಭಜಂತ್ರಿ, ನಿವೃತ್ತ ಸಿಆರ್ಪಿಎಫ್ ಎಎಸ್ಐ ಕುಮಾರಸ್ವಾಮಿ ಹಿರೇಮಠ, ನಿವೃತ್ತ ಸುಬೇದಾರ ಗದಿಗೆಪ್ಪ ಕಮ್ಮಾರ ಅವರನ್ನು ಗೌರವಿಸಲಾಗುತ್ತಿದೆ.
ಇದೇ ಸಮಾರಂಭಧಲ್ಲಿ ಗ್ರಂಥಾಲಯದ ಉದ್ಘಾಟನೆಯ ಜೊತೆಗೆ ಆದರ್ಶ ಶಿಕ್ಷಕಿ ಹೇಮಾ ಶಿರೋಳ, ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಷಣ್ಮುಖ ಮುಗಳಿ, ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಛಾಯಾ ಅಂಚಟಗೇರಿಯವರನ್ನೂ ಸಹ ಸನ್ಮಾನಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.