ಧಾರವಾಡ prajakiran.com : ಧಾರವಾಡ ತಾಲೂಕಿನ ಗ್ರಾಮವೊಂದರಲ್ಲಿ ಇತ್ತೀಚಿಗೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಶೀರ್ ಮಾಬುಸಾಬ ಗಡಾದವರ ಗಲ್ಲಿಗೇರಿಸಲು ಒತ್ತಾಯಿಸಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮನನೊಂದ ಬಾಲಕಿ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು. ಈ ಹಿನ್ನಲೆಯಲ್ಲಿ ಬಜರಂಗದಳ ಧಾರವಾಡ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಬಜರಂಗದಳ ಸಂಚಾಲಕ ಶಿವಾನಂದ ಸತ್ತಿಗೇರಿ, ನಮ್ಮ ಧಾರವಾಡ ಜಿಲ್ಲೆಯಲ್ಲಿ ಈ ರೀತಿ ಘಟನೆ ನಡೆದಿರುವದು ಅವಮಾನದ ಸಂಗತಿಯಾಗಿದೆ.
ಅಲ್ಲದೆ, ಘಟನೆ ನಡೆದು 10 ದಿನ ಕಳೆದರೂ ಇದುವರೆಗೆ ಆ ಬಾಲಕಿ ಕುಟುಂಬಸ್ಥರರಿಗೆ ಧಮ್ಕಿ ಹಾಕಿದ ಬಸೀರ ಕುಟುಂಬಸ್ಥರನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೋಲಿಸರು ಕೂಡಲೇ ಸಂಬಂಧಪಟ್ಟ ಇತರೆ ಆರೋಪಿಗಳನ್ನು ಬಂಧಿಸಬೇಕು. ಜೊತೆಗೆ ಆರೋಪಿ ಬಸೀರ್ ಮೇಲೆ ಐ ಪಿ ಸಿ ಕಲಂ 302 ಹಾಕಬೇಕು.
ಇಲ್ಲವಾದಲ್ಲಿ ಬಜರಂಗದಳ ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆ ಬಂದ್ ಕರೆ ಕೊಟ್ಟು ಉಗ್ರ ಹೊರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಬಳಿಕ ಧಾರವಾಡ ಎಸ್ ಪಿ ವರ್ತಿಕಾ ಕಟಿಯಾರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ತಾಲೂಕು ಕಾರ್ಯವಾಹಕ ನರಸಪ್ಪ ಬಟ್ಟಂಗಿ, ವಿಶ್ವ ಹಿಂದೂ ಪರಿಷದ್ ಪ್ರಾಂತ ಪ್ರಮುಖ ಮಲ್ಲಿಕಾರ್ಜುನ ಸತ್ತಿಗೇರಿ, ಬಜರಂಗದಳ ಧಾರವಾಡ ಜಿಲ್ಲಾ ಸಹ ಸಂಚಾಲಕ ಅಕ್ಷಯ ಕುಲಕರ್ಣಿ, ರಾಷ್ಟ್ರೀಯ ಹಿಂದೂ ಪರಿಷದ್ ಮುಖಂಡ ನಾಗರಾಜ ಯಾದವ್, ಹಿಂದೂ ಜಾಗರಣೆ ವೇದಿಕೆಯ ಜಯತೀರ್ಥ,, ಬಿಜೆಪಿ ಮುಖಂಡ ರುದ್ರಪ್ಪ ಅರಿವಾಳ, ಸಂಭಾಜಿ, ಮಹಾದೇವ ದಂಡಿನ ಹಾಗೂ ನೂರಾರೂ ಕಾರ್ಯಕರ್ತರು ಪಾಲ್ಗೊಂಡಿದ್ದರು.