ಬಾಗಲಕೋಟೆ prajakiran.com : ಪ್ರವಾಹ ಭೀತಿಯ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ನದಿ ತೀರದ ಹಲವು ಹಳ್ಳಿಗಳ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಮೂರು ನದಿಗಳ ಆರ್ಭಟ ಜೋರಾಗಿದೆ. ಹೀಗಾಗಿ ನದಿತೀರದ ಜನತೆ ಮತ್ತೆ ಕಂಗಾಲಾಗಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ.
ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಅಪಾಯ ಮೀರಿ ಹರಿಯುತ್ತಿದೆ ಮಲಪ್ರಭಾ ನದಿ ಕಳೆದ ವರ್ಷ ಕೂಡ ಗ್ರಾಮದ ಹಲವು ಮನೆ ನೆಲಸಮಗೊಂಡಿದ್ದವು.
ಈ ವರ್ಷ ಮತ್ತೆ ಪ್ರವಾಹ ಬಂದರೆ ಹೇಗೆ ಎಂಬ ಭೀತಿಯಲ್ಲಿದ್ದಾರೆ.ಇದೇ ವೇಳೆ ಕಳೆದ ವರ್ಷದ ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದ 7 ಕುಟುಂಬಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಗೊತ್ತಾಗಿದೆ.
ಅದರಲ್ಲೂ ಗೋವನಕೊಪ್ಪ ಗ್ರಾಮದ ತಾಯಿ ಮಗಳು ನಿನ್ನೆಯಿಂದ ಪರದಾಡುವಂತಾಗಿದೆ. ಅವರಿಗೆ ಕೂಡ ಪರಿಹಾರ ನೀಡಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ.