ಹಾಸನ prajakiran.com ; ಜಿಲ್ಲೆಯ ಅರೇಹಳ್ಳಿಯ ಲಿಂಗಾಪುರದ RSS ಕಾರ್ಯಕರ್ತರು ರಾಮ ಜನ್ಮಭೂಮಿ ನಿಧಿ ಸಂಗ್ರಹಕ್ಕೆ ಮನೆ ಮನೆಗೆ ತೆರಳಿದಾಗ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಅವಿನ್ ಅಲ್ವಾರಿಸ್ ಎಂಬ ಯುವಕ ವೃತ್ತಿಯಿಂದ ಟ್ಯಾಕ್ಸಿ ನಡೆಸುತ್ತಿದ್ದರೂ 3001/-ಗಳನ್ನು ತುಂಬುಮನದಿಂದ ಸ್ವ ಇಚ್ಚೆಯಿಂದ ನೀಡಿ ಕೆಲಸ ಯಶಸ್ವಿಯಾಗಲೆಂದು ಹಾರೈಸಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಇವರ ಈ ಸೇವೆಗೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದ್ದು, ಇದೇ ನಿಜವಾದ ಭಾರತದ ಸೌಹಾರ್ದತೆ. ಈ ಸೌಹಾರ್ದತೆ ಎಲ್ಲರಲ್ಲೂ ಮೂಡಿಬಂದರೆ ಒಳ್ಳೆಯದು ಎಂದು ಆಶಿಸಿದರು.
ರಾಮಸೇವೆಯಲ್ಲಿ ತನ್ಮೂಲಕ ಭವ್ಯ ರಾಮಮಂದಿರ ನಿರ್ಮಾಣದಲ್ಲಿ ಎಲ್ಲರೂ ಸರ್ವ ಭಾರತೀಯರು ತೊಡಗಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ.