ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿನ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಶನಿವಾರದ ಪಾವನ ಪರ್ವದಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿಯವರು ಸುದೀರ್ಘ ಕಾಲ ಬಾಳಿ ಇನ್ನು ಹೆಚ್ಚಿನ ಜನಸೇವೆಗೈಯಲು ಹಾಗೂ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಗಳಾಗಲೆಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಆಂಜನೇಯನ ಆಶೀರ್ವಾದಕ್ಕೆ ಭಾಜನರಾಗಿ ಕೇಂದ್ರ ಸಚಿವರ 61ನೇ ಜನುಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಜರುಗಿತು
ನೂರಾರು ಯುವಕರು, ಹಿತೈಷಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ, ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಗೋವಿಂದ ಜೋಶಿ, ಮುಖಂಡರಾದ ಟಿ ಎಸ ಪಾಟೀಲ, ಮಾಜಿ ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರು ನಿತಿನ ಇಂಡಿ, ಶಂಕರ ಶೇಳಕೆ, ಆನಂದ ಯಾವಗಲ ಅನಿತಾ ಚಳಗೇರಿ, ಜಿಲ್ಲಾದ್ಯಕ್ಷ ಸಂಜಯ ಕಪಟಕರ, ಜಿಲ್ಲಾ ಪ್ರಧಾನಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಈರಣ್ಣ ಹಪ್ಪಳಿ, ಮಂಡಲ ಅಧ್ಯಕ್ಷ ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿಗಳು ಶ್ರೀನಿವಾಸ ಕೋಟ್ಯಾನ, ರಾಕೆಶ ನಾಜರೆ , ಶಕ್ತಿ ಹಿರೇಮಠ, ವಿನಾಯಕ ಗೊಂದಳಿ ಶಫಿ ಬಿಜಾಪುರಿ, ರಾಹುಲ ಮಲ್ಲಿಗವಾಡ ರಾಜೇಶ ಚಾಂದಗುಡೆ ಹಾಗು ಅಪಾರ ಸಂಖ್ಯೆಯ ರಕ್ತದಾನಿಗಳು ಉಪಸ್ಥಿತರಿದ್ದರು.