ನವದೆಹಲಿ prajakiran.com : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನ ವಿರೋಧಿಸಿ ರೈತರ ಪ್ರತಿಭಟನೆಯಲ್ಲಿ ವೃದ್ಧ ರೈತನ ಮೇಲೆ ಪೊಲೀಸರು ಬಲವಂತಾಗಿ ಲಾಠಿ ಬೀಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಆದರೀಗ ಆ ಫೋಟೋ ಕ್ಲಿಕ್ಕಿಸಿದ ಫೋಟೋ ವರದಿಗಾರನ ಮೇಲೆ ದುಷ್ಕರ್ಮಿಗಳ ತಂಡ ದಾಳಿ ಎಂದು ಸ್ವತಃ ವರದಿಗಾರನೆ ಹೇಳಿದ್ದಾನೆ.
ದೆಹಲಿ ಮೂಲದ ಪಿಟಿಐ ನ ಫೋಟೋ ವರದಿಗಾರರಾದ ರವಿ ಚೌಧರಿ ಈ ವಿಚಾರವನ್ನು ಸ್ವತಃ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ನಾನು ಬೈಕ್ನಲ್ಲಿ ಹೋಗುತ್ತಿದ್ದಾಗ ಬೊಲೆರೋ ವಾಹನದಲ್ಲಿ ಬಂದ 5 ರಿಂದ 6 ಮಂದಿ ದುಷ್ಕರ್ಮಿಗಳು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುರಾದ್ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ಎಫ್ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದರು.
ಈ ಕುರಿತು ವರದಿಗಾರನ ಟ್ವೀಟ್ ವೈರಲ್ ಆಗುತ್ತಿದ್ದಂತೆ ಒಂದು ದಿನದ ಬಳಿಕ ಇಂದು ಘಜಿಯಾಬಾದ್ ಪೊಲೀಸ್ ಆನ್ ಲೈನ್ ಎಫ್ಐಆರ್ ದಾಖಲಿಸಿದ್ದು, ಈ ರೀತಿಯ ತ್ವರಿತ ಕ್ರಮಕ್ಕಾಗಿ ವರದಿಗಾರ ರವಿ ಧನ್ಯವಾದಗಳು ತಿಳಿಸಿದ್ದಾರೆ.
ನೈಜ ಘಟನೆ ಕುರಿತು ವರದಿ ಮಾಡಿದ ವರದಿಗಾರನೀಗ ಸಂಕಷ್ಟ ಎದುರಿಸುವಂತೆ ಆಗಿರುವುದು ವಿಪರ್ಯಾಸದ ಸಂಗತಿಯಾಗಿದೆ.