ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಉಳವಿ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಕಂಕಣದಿಂದ ಹಲವಾರು ಆಕಾಂಕ್ಷಿಗಳು ದೂರ ಉಳಿದ್ದದ್ದು ಕಂಡು ಬಂತು.
ಅದರಲ್ಲೂ ವಿಶೇಷವಾಗಿ ಪ್ರಮುಖ ಆಕಾಂಕ್ಷಿಗಳಾದ ಬಯಲು ಸೀಮೆಯ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ, ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರ ಶೆಟ್ಟಿ ಸೇರಿದಂತೆ ಅನೇಕ ಆಕಾಂಕ್ಷಿಗಳು ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ
ಹಾಲಿ ಶಾಸಕ ಅಮೃತ ದೇಸಾಯಿ
ಪಕ್ಷದ ಹಲವರ ಜೊತೆಗೆ ಉತ್ತಮ ಸಂಬಂಧ ಹೊಂದಿರದೆಯಿರುವುದು ಗೆಲುವಿಗೆ ಮುಳುವಾಗಲಿದೆ ಎಂದು ಪಕ್ಷದ ವಲಯದಲ್ಲಿಯೇ ಗುಸು ಗುಸು ನಡೆಯುತ್ತಿದೆ.
ಪಕ್ಷದ ಟಿಕೇಟ್ ಕೊಡುವ ವಿಚಾರದಲ್ಲಿ ಅನೇಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಲ್ಲೇ ಪಕ್ಷದ ಆಣೆ ಪ್ರಮಾಣದ ಹಿನ್ನೆಲೆಯಲ್ಲಿ ಅನೇಕ ಪ್ರಮುಖ ನಾಯಕರು ಗೈರು ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.
ಹೀಗಾಗಿ ವಿಜಯ ಕಂಕಣದಲ್ಲೂ ಅದರ ಕರಿಛಾಯೆ ಕಂಡು ಬಂದಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಕಾದು ನೋಡಬೇಕು .