ತುಮಕೂರು Prajakiran.com : ಇಲ್ಲಿನ ಎಸ್. ಎಸ್. ಐ.ಟಿ. ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ತಿರುಪತಿಯ ಇಬ್ಬರು ಯುವಕರನ್ನು ತುಮಕೂರಿನ ಸಿ.ಎ.ಎನ್. ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಇನ್ಸ್ಫೆಕ್ಟರ್ ಎಂ. ವಿ.ಶೇಷಾದ್ರಿ ನೇತೃತ್ವದ ತಂಡ ಇಂದು ಬೆಳಿಗ್ಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾ ಧಿಕಾರಿಯವರು ತಿಳಿಸಿದ್ದಾರೆ.
ಕಿರಣ್ (20) ಮತ್ತು ಪವನ್(19) ಬಂಧಿತ ಆರೋಪಿಗಳು. ತಿರುಪತಿಯ ಯುವಕರು ಕೆಎ06ಹೆಚ್ ಎ 7548 ಎಂಬ ವಾಹನದಲ್ಲಿ ತಿರುಪತಿಯಿಂದ ಗಾಂಜಾ ತಂದು ಮಾರಾಟಮಾಡುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.
ಇವರಿಂದ 6 ಕೆಜಿ ಗಾಂಜಾ, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಇವರು ವಿಶಾಖಪಟ್ಟಣದ ಸುರೇಶ್ ಎಂಬ ವ್ಯಕ್ತಿಯಿಂದ ಈ ಗಾಂಜಾ ತರುತ್ತಿದ್ದುದಾಗಿ ತಿಳಿಸಿದ್ದಾರೆ.