ರಾಜ್ಯ

ಕೊನೆಗೂ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ

ತೇಲಿಹೋದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ  ಪರಿಹಾರ ಧಾರವಾಡ prajakiran.com : ತುಪ್ಪರಿಹಳ್ಳದ ಪ್ರವಾಹದಲ್ಲಿ ತೇಲಿಹೋದ ಹಾರೋಬೆಳವಡಿಯ ರೈತ ಮಡಿವಾಳಪ್ಪ ಜಕ್ಕಣ್ಣವರ ಅವರ ತಂದೆ ನಾಗಪ್ಪ ಅವರಿಗೆ 5 ಲಕ್ಷ ಮೊತ್ತದ ಪರಿಹಾರದ ಚೆಕ್ ಅನ್ನು ಭಾನುವಾರ ಧಾರವಾಡ ಜಿಲ್ಲಾಡಳಿತ ಕೊನೆಗೂ ಹಸ್ತಾಂತರಿಸಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಿದೆ. ತುಪರಿಹಳ್ಳದಲ್ಲಿ ಕೋಚ್ಚಿ ಹೋದ ರೈತ 56 ದಿನ ಕಳೆದರೂ ನಾಪತ್ತೆ, ಹಿರಿಯ ಜೀವಗಳ ಕಣ್ಣೀರು ಒರೆಸದ ಜಿಲ್ಲಾಡಳಿತ ಎಂದು ಈ ಕುರಿತು ಪ್ರಜಾಕಿರಣ.ಕಾಮ್ ಸಮಗ್ರ ವರದಿ ಪ್ರಕಟಿಸಿತ್ತು. […]

ರಾಜ್ಯ

ಧಾರವಾಡದ ತುಪರಿ ಹಳ್ಳದಲ್ಲಿ ಕೋಚ್ಚಿ ಹೋದ ರೈತ 56 ದಿನ ಕಳೆದರೂ ನಾಪತ್ತೆ…!

ಜಿಲ್ಲಾಡಳಿತದ ವಿರುದ್ದ ಪಿ.ಎಚ್. ನೀರಲಕೇರಿ ಆಕ್ರೋಶ ಮಗನ ನೆನೆದು ರೈತ ತಂದೆ ತಾಯಿ ಕಣ್ಣೀರು follow/like: facebook.com/prajakirannews ಧಾರವಾಡ prajakiran.com : ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ  ರೈತ ಮಡಿವಾಳಪ್ಪ‌ ನಾಗಪ್ಪ ಜಕ್ಕನವರ ಜಾನುವಾರು ಕಾಯಿಸಲು ಹೋದಾಗ ತುಪರಿಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿ 56 ದಿನ ಕಳೆದರೂ ಜಿಲ್ಲಾಡಳಿತ ಈವರೆಗೆ ರೈತನನ್ನು ಹುಡುಕಿಕೊಡದೆ ದಿವ್ಯ ನಿರ್ಲಕ್ಷ್ಯ ತೋರಿಸಿದೆ. ಇನ್ನೂ ಒಂದುಅಚ್ಚರಿಯ ಸಂಗತಿಯೆಂದರೆ, ಆ ಬಡ ತಂದೆ ತಾಯಿಗೆ(ಹಿರಿಯ ಜೀವಗಳಿಗೆ) ಸಾಂತ್ವನವೂ ಹೇಳದೆ (ಐದು ಲಕ್ಷ ಪರಿಹಾರವೂ ನೀಡದೆ) […]

ರಾಜ್ಯ

ತುಂಬಿ ಹರಿಯುತ್ತಿರುವ ಬೆಣ್ಣಿ ಹಳ್ಳ, ತುಪರಿ ಹಳ್ಳ…!

ಧಾರವಾಡ prajakiran.com : ನಿನ್ನೆಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ, ತುಪರಿ ಹಳ್ಳ  ಸೇರಿದಂತೆ ಬಹುತೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯತ್ತಿವೆ. ಬೆಣ್ಣಿ ಹಳ್ಳ ಹಾಗೂ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದ್ದು, ಕಳೆದ ವರ್ಷ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುತ್ತಿವೆ. ಗ್ರಾಮಾಂತರ ಭಾಗದಲ್ಲಿ ಮಳೆಯಿಂದ ಕೆಲವೊಂದಿಷ್ಟು ಮನೆಗಳಿಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನು ವಿಪರೀತ ಮಳೆಯಿಂದಾಗಿ ಬೆಳೆಗಳು ಮಳೆಯ ಪಾಲಾಗಿವೆ. ಇನ್ನೇನು ಕೆಲವೊಂದಿಷ್ಟು ದಿನ ಕಳೆದಿದ್ದರೆ ಹೆಸರು ಕಟಾವಿಗೆ ಬರುತ್ತಿತ್ತು. […]