ರಾಜ್ಯ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಸರ್ಜಾ ಕುಸಿತ : ಒಬ್ಬ ಕಾರ್ಮಿಕನಿಗೆ ಗಂಭೀರ ಗಾಯ

ಧಾರವಾಡದಲ್ಲಿ
ನಿರ್ಮಾಣ ಹಂತದ ಕಟ್ಟಡ ಸರ್ಜಾ ಕುಸಿತ : ಒಬ್ಬ ಕಾರ್ಮಿಕನಿಗೆ ಗಂಭೀರ ಗಾಯ

*ಕಳಪೆ ಕಾಮಗಾರಿಗೆ ಸರ್ಜಾ, ಗೊಡೆ ಕಾರಣ*

*ನಿರ್ಮಿತಿ ಕೇಂದ್ರದಿಂದ ಬೇಜವಾಬ್ದಾರಿ ನಿರ್ವಹಣೆ*

*ಸಮಾಜ ಕಲ್ಯಾಣ ಇಲಾಖೆಯ ಜಾಣಕುರುಡು*

*ಬಿಹಾರ ಮೂಲಕ ಕಾರ್ಮಿಕನ ಕಾಲು‌ ಮೊಳೆ ಮುರಿತ*

ಧಾರವಾಡ ಪ್ರಜಾಕಿರಣ.ಕಾಮ್  : ಇಲ್ಲಿನ ಸಪ್ತಾಪುರದಲ್ಲಿರುವ
ಗೌರಿ ಶಂಕರ್ ವಸತಿ ನಿಲಯದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹೊಸದಾಗಿ ನಿರ್ಮಿಸುತ್ತಿರುವ ನಿರ್ಮಾಣ ಹಂತದ ಕಟ್ಟಡದ ಸರ್ಜಾ ಕುಸಿದು ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಗಂಭೀರವಾಗಿ ಗಾಯಗೊಂಡ
ಗಾಯಾಳುವನ್ನು ಬಿಹಾರ ಮೂಲದ ಕಾರ್ಮಿಕ ಸಂದೀಪ್ (30) ಎಂದು ಗುರುತಿಸಲಾಗಿದೆ.

ತಕ್ಷಣವೇ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದ್ದು, ಆರಂಭದಲ್ಲಿ ಕೆಲಕಾಲ ಮೂರ್ಚೆಗೊಂಡಿದ್ದ, ಆತ ಸಂಜೆ ವೇಳೆಗೆ ಚೇತರಿಸಿಕೊಂಡಿದ್ದಾನೆ.

ಇದರಿಂದಾಗಿ ಕೆಲಕಾಲ ಕಟ್ಟಡ ಕಾರ್ಮಿಕರು ಆತಂಕಗೊಂಡಿದ್ದರು.

ಕಾರ್ಮಿಕರ ಸುರಕ್ಷತೆಗಾಗಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ನಿರ್ಮಿತಿ ಕೇಂದ್ರ ತೆಗೆದುಕೊಳ್ಳದ ಕಾರಣ ಹಾಗೂ ಕಾಮಗಾರಿ ಕಳಪೆಯಾಗಿರುವುದರಿಂದ ಸರ್ಜಾ ಕುಸಿದಿದ್ದು, ಕಾರ್ಮಿಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸಂದೀಪನ ಕಾಲಿನ‌ ಮೊಳೆ ಮುರಿದಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಜರುಗಿಸುವಂತೆ ಜಂಟಿ ನಿರ್ದೇಶಕರಾದ ಪಿ. ಶುಭಾ ಅವರಿಗೆ ಸಾಮಾಜಿಕ ಕಾರ್ಯಕರ್ತ ಸುರೇಶ ಕೋರಿ ಬಿಸಿ ತಾಕಿಸಿ, ತೀವ್ರ ತರಾಟೆಗೆ ತೆಗೆದುಕೊಂಡರು.

ಆಗ ಸ್ಥಳಕ್ಕೆ ದೌಡಾಯಿಸಿದ ಅವರು,
ಈ ಕಟ್ಟಡದ ನಿರ್ಮಾಣ
ಜವಾಬ್ದಾರಿ ನಿರ್ಮಿತಿ ಕೇಂದ್ರ ವಹಿಸಿಕೊಂಡಿದ್ದು, ಕಳಪೆ ಕಾಮಗಾರಿಯೇ ಸರ್ಜಾ ಕುಸಿತಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ಕೋರಿ ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕರಾದ ಪಿ. ಶುಭಾ ಅವರಿಗೆ ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಜಂಟಿ ನಿರ್ದೇಶಕರು, ಅಲ್ಲಿಯವರೆಗೆ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೆ, ಇದರ ಪಕ್ಕದ ಕಟ್ಟಡ ಉದ್ಘಾಟನೆ ಮುನ್ನವೇ ಸೋರಿಕೆ ಆಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

  1. ನಿರ್ಮಿತಿ ಕೇಂದ್ರದ ಎಲ್ಲಾ ಕಳಪೆ ಕಾಮಗಾರಿಯ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ಕೋರಿ ಎಚ್ಚರಿಸಿದರು.
PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *