ಧಾರವಾಡ ಪ್ರಜಾಕಿರಣ.ಕಾಮ್ : ಇಲ್ಲಿನ ಭೋವಿ ಗಲ್ಲಿ ನಿವಾಸಿ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾಗಿದ್ದ ವಿರೂಪಾಕ್ಷಗೌಡ.ಎಂ.ಪಾಟೀಲ (74)
ಅವರು ಇಂದು ಮಂಗಳವಾರ ಜೂ.18 ರಂದು ಬೆಳಗಿನ 3.30 ಕ್ಕೆ ಇಹಲೋಕ ತ್ಯಜಿಸಿದರು.
ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3.30 ಕ್ಕೆ ನೆರವೇರಲಿದೆ.
ಮೃತರಿಗೆ ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರು ಹುಬ್ಬಳ್ಳಿ ಧಾರವಾಡ ನಗರ ವಲಯ, ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ ಕ್ಷೇತ್ರದ ಶಿಕ್ಷಣಾಧಿಕಾರಿಯಾಗಿ,ಡೈಟ್ ಪ್ರಾಂಶುಪಾಲರಾಗಿ, ಧಾರವಾಡ ಜಿಲ್ಲೆಯ ಉಪನಿರ್ದೇಶಕ, ಬೆಳಗಾವಿ ಡೈಟ್ ಹಾಗು ಬೆಳಗಾವಿ ಜಿಲ್ಲೆಯ ಉಪನಿರ್ದೇಶಕರಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಗೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.