ಕುಂದಗೋಳ prajakiran.com : ಜಾನಪದ ಕಲಾವಿದ ಇಂಗಳಗಿ ಗ್ರಾಮರಂಗ ರೂವಾರಿ ದೊಡ್ಡಾಟ ಕಲೆಯ ಮೂಲಕ ಜನಾನುರಾಗಿಯಾಗಿದ್ದ ವೀರೇಶ ಬಡಿಗೇರ ( 50) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
ಧಾರವಾಡ ಜಿಲ್ಲೆಯ ಜಾನಪದ ಕಲಾವಿದರಿಗೆ ಅದರಲ್ಲೂ ವಿಶೇಷವಾಗಿ ಯುವ ಕಲಾವಿದರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ವೀರೇಶ್ ಬಡಿಗೇರ್ ನಿಧನ ಜಾನಪದ ಲೋಕಕ್ಕೆ ಬರಸಿಡಿಲು ಬಡಿದಂತಾಗಿದೆ.
ಅವರು ಪತ್ನಿ ಒಬ್ಬ ಪುತ್ರ,ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ತಮ್ಮ ಮಧುರ ಕಂಠದಿಂದ ಕೇಳುಗರಿಗೆ ಮಹದಾನಂದವನ್ನು ನೀಡುತ್ತಿದ್ದರು. ಇಂತಹ ಯುವ ಕಲಾವಿದ ಇಷ್ಟು ಬೇಗನೆ ಮರೆಯಾಗುತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಖ್ಯಾತ ದೊಡ್ಡಾಟ ಕಲಾವಿದ ಮಲ್ಲೇಶ ಮಾಳವಾಡ ದುಖಿಃಸಿದ್ದಾರೆ.
ಕುಂದಗೋಳ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ವೀರೇಶ್ ಬಡಿಗೇರ್ ಅವರ ನೇತೃತ್ವದ ತಂಡ ಜಾನಪದ ಹಾಗೂ ತತ್ವಪದಗಳನ್ನು ಹಾಡುತ್ತಾ ರಂಜಿಸುತ್ತಿದ್ದರು ಇಂತಹ ಯುವ ಕಲಾವಿದನನ್ನು ಕಳೆದುಕೊಂಡ ಗ್ರಾಮರಂಗದ ಬಳಗವೀಗ ಅನಾಥವಾದಂತಾಗಿದೆ.