ಧಾರವಾಡ Prajakiran.com : ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆಯ ಸಂಚಾರ ಸುರಕ್ಷತೆಗಾಗಿ ಅಳವಡಿಸಿದ ಟ್ಯೂಬ್ಲರ್ ಕಾನ್ ಗಳು ಕಿತ್ತು ಹಾಳಾಗಿದ್ದವು .
ಅವುಗಳನ್ನು ಧಾರವಾಡ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಮಲ್ಲನಗೌಡ ನಾಯಕ ಅವರ ಸಲಹೆ ಮೇರೆಗೆ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಇಂದು ನಗರದ ಸಪ್ತಾಪುರ, ಕೆಸಿಡಿ, ಶ್ರೀನಗರ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಿತ್ತು ಹಾಳಾಗಿದ್ದ ಟ್ಯೂಬ್ಲರ್ ಕಾನ್ ಗಳನ್ನು ಹೊಸದಾಗಿ ಅಳವಡಿಸುವ ಕೆಲಸ ಮಾಡಿದರು.
ಸ್ವತಃ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಲ್ಲನಗೌಡ ನಾಯಕ ಅವರು ಟ್ಯೂಬ್ಲರ್ ಕಾನ್ ಅಳವಡಿಸುವದನ್ನು ವಿಕ್ಷಣೆ ಮಾಡಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸಲಹೆ ಸೂಚನೆಗಳನ್ನು ಸಿಬ್ಬಂದಿಗಳಿಗೆ ನೀಡಿದರು.
ಅಪಘಾತ ಪ್ರಕರಣ ನಿಯಂತ್ರಣಕ್ಕೆ ಸಂಚಾರಿ ಸುರಕ್ಷತಾ ನಿಯಮವು ಬಹಳ ಪ್ರಮುಖವಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ಕಡೆಯೂ ಸಂಚಾರಿ ದೀಪ ಸೇರಿದಂತೆ ಟ್ಯೂಬ್ಲರ್ ಕಾನ್ ಗಳ ಅಳವಡಿಕೆ ಕೆಲಸಕ್ಕೆ ಪೊಲೀಸರು ಮುಂದಾಗಿರುವುದು ಸಾರ್ವಜನಿಕರು ಶ್ಲಾಘಿಸಿದರು.
ಧಾರವಾಡ ಟ್ರಾಫಿಕ್ ಪೊಲೀಸ್ ಡಿ. ವಿ. ಘಸಳರೆಡ್ಡಿ, ಹೊಂ ಗಾರ್ಡ ಸಂಗಮೇಶ ಪರಂಡಿ ಸೇರಿದಂತೆ ಧಾರವಾಡ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಕೆಲಸ ನಿರ್ವಹಿಸಿದರು.