ಧಾರವಾಡ prajakiran.com :
ಧಾರವಾಡ ತಹಸಿಲ್ದಾರ ಸಂತೋಷ ಬಿರಾದಾರ ಅವರು ರಾತ್ರಿ ಕರ್ಪ್ಯೂ ಜಾರಿ ಸಲುವಾಗಿ ಜಿಲ್ಲಾಧಿಕಾರಿ ವಿಧಿಸಿರುವ ಕಲಂ 144 ರ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಿರುವದರ ಕುರಿತು ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಹಾಗೂ ಸುಪರ್ ಮಾರ್ಕೆಟ್, ಸುಭಾಸರಸ್ತೆ, ಲೈನ್ ಬಜಾರ, ಟಿಕಾರೆ ರಸ್ತೆ, ಶಿವಾಜಿ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ನರೇಂದ್ರ ಕ್ರಾಸ್ ವರೆಗೆ ಸಂಚರಿಸಿ, ನರೇಂದ್ರ ಕ್ರಾಸ್ ದಲ್ಲಿ ಆದೇಶ ಉಲ್ಲಂಘಿಸಿ, 9 ಗಂಟೆ ನಂತರವು ಮಾವಿನ ಹಣ್ಣಿನ ಅಂಗಡಿ ತೆರೆದಿದ್ದ ಅಂಗಡಿ ಮಾಲೀಕನಿಗೆ ದಂಡ ವಿಧಿಸಿ, ತಕ್ಷಣ ಬಂದ್ ಮಾಡಿಸಿದರು.
ತಹಸಿಲ್ದಾರ ಅವರೊಂದಿಗೆ ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಾಧಿಕಾರಿಗಳು ಇದ್ದರು.