ರಾಜ್ಯ

ವಿನಯ ಕುಲಕರ್ಣಿ ಮನೆಯಲ್ಲಿ ಎರಡು ಗಂಟೆ ಚರ್ಚೆ ನಡೆಸಿದ ಎಂ.ಬಿ.ಪಾಟೀಲ್

ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಅವರು ಶುಕ್ರವಾರ ಧಾರವಾಡದಲ್ಲಿ ವಿನಯ ಕುಲಕರ್ಣಿ ಮನೆಗೆ ಭೇಟಿ ನೀಡಿ ಎರಡು ಗಂಟೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಪ್ರೀಂ ಕೋರ್ಟ್ ನಲ್ಲಿ ಡಿಸ್‌ಮಿಸ್ ಆಗಿದ್ದ ಕೇಸ್ ಅದು. ಅದನ್ನು ರೀ ಓಪೆನ್ ಮಾಡಲಾಗಿದೆ. ಈ ಸಂಬಂಧ ಸಂಕಷ್ಟ ಎದುರಾಗಿದೆ ಎಂದರು. ಇದು ದ್ವೇಷದ‌ ರಾಜಕಾರಣ. ಅಧಿಕಾರ ಯಾವತ್ತೂ ಶಾಶ್ವತವಲ್ಲ ಚುನಾವಣೆಯಲ್ಲಿ ಸೋಲು ಗೆಲುವು […]