ಧಾರವಾಡ prajakiran. com : ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ರಜತಗಿರಿಯಲ್ಲಿ ನಡೆದಿದೆ.
ಅಭಿಷೇಕ ಮಹಾದೇವಪ್ಪ ಮಾಳಗೆ(26) ಮನೆಯಲ್ಲಿ ರಾತ್ರಿ ನೇಣಿಗೆ ಶರಣಾದ ದುರ್ದೈವಿ ಎಂದು ತಿಳಿದುಬಂದಿದೆ.
ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಧಾವಿಸಿದ ವಿದ್ಯಾಗಿರಿ ಪೊಲೀಸರು ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಮೃತ ಅಭಿಷೇಕ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿದ್ದು ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಅಭಿಷೇಕ್ ಮಾಳಗಿ ಎಂಬಿ ಎ ಪದವೀಧರನಾಗಿದ್ದ. ಉತ್ತಮ ಕ್ರಿಕೆಟ್ ಆಟಗಾರನಾಗಿ ಧಾರವಾಡದ ಎಸ್ ಡಿ ಎಂ ಕ್ರಿಕೆಟ್ ಅಕಾಡೆಮಿ ಪರವಾಗಿ ಆಡಿದ್ದನ್ನು ಇಲ್ಲಿ ಸ್ಮರಿಸಬಹುದು.